News Karnataka Kannada
Sunday, May 05 2024
ಮಂಗಳೂರು

ಇಳಿಯೂರು ಶ್ರೀ ಮಹಾವಿಷ್ಣು ದೇವಸ್ಥಾನದ ಅಷ್ಟಬಂಧ ಪ್ರತಿಷ್ಠಾ ಬ್ರಹ್ಮಕಲಶೋತ್ಸವ

Bantwal
Photo Credit :

ಬಂಟ್ವಾಳ, ಮೇ ೩: ಯಾವುದೇ ಒಂದು ಕ್ಷೇತ್ರದ ಜೀರ್ಣೋದ್ಧಾರವಾಗಬೇಕಾದರೆ ದೇವಚಿತ್ತ ಅತಿ ಅಗತ್ಯವಾಗಿದ್ದು, ಇಲ್ಲಿನ ಗ್ರಾಮಸ್ಥರು ಬಹಳ ವರ್ಷಗಳಿಂದ ಕಾಯುತ್ತಿದ್ದ ಪುಣ್ಯ ಕ್ಷಣಕ್ಕೆ ಇಳಿಯೂರು ಪ್ರಸ್ತುತ ಸಾಕ್ಷಿಯಾಗುತ್ತಿದೆ ಎಂದು ಜ್ಯೋತಿಷಿ ವೇ|ಮೂ| ಸುಬ್ರಹ್ಮಣ್ಯ ಭಟ್ ಪಚ್ಚಾಡಿಬೆÊಲು ಅವರು ಹೇಳಿದರು.

ಅವರು ಮಣಿನಾಲ್ಕೂರು ಗ್ರಾಮದ ಇಳಿಯೂರು ಶ್ರೀ ಮಹಾವಿಷ್ಣು ದೇವಸ್ಥಾನದ ಅಷ್ಟಬಂಧ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ, ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ಇಂದಿನ ಯುವ ಸಮುದಾಯಕ್ಕೆ ಹಿರಿಯರು ಸರಿಯಾದ ಮಾರ್ಗದರ್ಶನ ಮಾಡುವ ಮೂಲಕ ಪ್ರೀತಿಯನ್ನು ಹಂಚುವ ಕಾರ್ಯಕ್ಕೆ ಪ್ರೇರೇಪಣೆ ಕೊಟ್ಟಾಗ ಧಾರ್ಮಿಕ ಕ್ಷೇತ್ರಗಳ ಪುನರುತ್ಥಾನ ಸಾಧ್ಯ ಎಂದು ಹೇಳಿದರು.

ಬಿ.ಸಿ.ರೋಡಿನ ಹಿರಿಯ ನ್ಯಾಯವಾದಿ ಅಶ್ವಿನಿಕುಮಾರ್ ರೈ ಅಧ್ಯಕ್ಷತೆ ವಹಿಸಿದ್ದರು. ದೇವಸ್ಥಾನ ನಿರ್ಮಾಣಕ್ಕೆ ಸಹಕರಿಸಿದ ಶಿವಪ್ಪ ಪೂಜಾರಿ ಜೇಡರಬೆಟ್ಟು, ಲಿಂಗಪ್ಪ ಪೂಜಾರಿ ಕೆಂಚನಬೆಟ್ಟು, ಅಮರನಾಥ ಅಜಿಲ ಆರಿಕಲ್ಲು, ಮೋಹನದಾಸ ಶೆಟ್ಟಿ ಬೆಂಗಳೂರು, ನಾರಾಯಣ ಶೆಟ್ಟಿ ಪಡ್ಡಾಯಿಮಜಲು, ಸೂರ್ಯನಾರಾಯಣ ಮಯ್ಯ, ಅನಂತರಾಮ ಮಯ್ಯ, ದಯಾನಂದ ನಾಯ್ಕ್ ಸುಳ್ಯ, ಪ್ರಶಾಂತ್ ನಾಯಕ್ ಮಾವಿನಕಟ್ಟೆ, ಮೋನಪ್ಪ ಪೂಜಾರಿ ಬÉÊಸೊಂಬು, ವಿಜಯ್ ಹಟದಡ್ಕ, ಜಯಪೂಜಾರಿ ನೇಲ್ಯಪಲ್ಕೆ, ಶೀನ ನಾಯ್ಕ್ ಹಲ್ಲಂಗಾರು ಅವರನ್ನು ಸಮ್ಮಾನಿಸಲಾಯಿತು.

ವೇದಿಕೆಯಲ್ಲಿ ಪುರೋಹಿತ ವೇ|ಮೂ| ವಿಜಯಕೃಷ್ಣ ಐತಾಳ್, ಉದಯಕುಮಾರ್ ಅಜಿಲ ಕಟ್ಟೆಮನೆ, ದ.ಕ.ಜಿಲ್ಲಾ ಗೃಹರಕ್ಷಕ ದಳದ ಕಮಾಂಡೆAಟ್ ಡಾ| ಮುರಳಿಮೋಹನ್ ಚೂಂತಾರು, ಕಕ್ಯಬೀಡು ಕ್ಷೇತ್ರದ ಮಾಜಿ ಅಧ್ಯಕ್ಷ ದಾಮೋದರ ನಾಯಕ್ ಉಳಿ, ಪುರೋಹಿತ ರತ್ನಾಕರ ಭಟ್ ಸರಪಾಡಿ, ಕಟ್ಟೆಮಾರ್ ಶ್ರೀ ಮಂತ್ರದೇವತೆ ಕ್ಷೇತ್ರದ ಮನೋಜ್ ಕಟ್ಟೆಮಾರ್, ಉದ್ಯಮಿಗಳಾದ ವಾಸುದೇವ ಭಟ್ ಕುಂಜತ್ತೋಡಿ, ಸಂಜೀವ ಪೂಜಾರಿ ಬಿ.ಸಿ.ರೋಡು, ಸುಧಾಕರ ಆಚಾರ್ಯ ಮಾರ್ನಬÉÊಲು, ಸುದೀಪ್‌ಕುಮಾರ್ ಶೆಟ್ಟಿ ಮಾಣಿ, ಸ್ಥಳದಾನಿ ಯಮುನಾ ಇಳಿಯೂರು, ಮಣಿನಾಲ್ಕೂರು ಸಿಎ ಬ್ಯಾಂಕ್ ಸಿಇಒ ಸುಧಾಕರ ಶೆಟ್ಟಿ ಎಚ್, ಪ್ರಗತಿಪರ ಕೃಷಿಕ ವಾಸುದೇವ ಮಯ್ಯ ಪುಳ್ಳೇರಿ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಬಿ.ಪದ್ಮಶೇಖರ್ ಜೈನ್, ಸಂಚಾಲಕ ಸಂಪತ್‌ಕುಮಾರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಶಿವಪ್ಪ ಪೂಜಾರಿ ಹಟದಡ್ಕ, ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷೆ ಲಾವಣ್ಯ ಬಲ್ಲಾಳ್ ಉಪಸ್ಥಿತರಿದ್ದರು.

ಸ್ವಾಗತ ಸಮಿತಿಯ ಪ್ರದೀಪ್ ಕಟ್ಟದಡೆ ಸ್ವಾಗತಿಸಿದರು. ಪ್ರಕಾಶ್ ಅಂಚನ್ ಹಾಗೂ ಹರಿಪ್ರಸಾದ್ ಡೆಚ್ಚಾರ್ ಸಮ್ಮಾನಿತರ ವಿವರ ನೀಡಿದರು. ರಾಜೀವ ಕಕ್ಯಪದವು ಕಾರ್ಯಕ್ರಮ ನಿರ್ವಹಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
153
Mounesh V

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು