News Karnataka Kannada
Saturday, May 04 2024
ಮಂಗಳೂರು

ವೇಣೂರು: ಕೊನೆಗೂ ಮೌಢ್ಯಕ್ಕೆ ಬಲಿಯಾದ ಶ್ರೀತಾಳೆ!

Inauguration of administrative office of Federation of Bunts Associations at Mulki on April 5
Photo Credit :

ಬೆಳ್ತಂಗಡಿ: ಭಾರೀ ಚರ್ಚೆಗೆ ಎಡೆಮಾಡಿದ್ದ ವೇಣೂರು ಸನಿಹದ ಕರಿಮಣೇಲು ಗ್ರಾಮದಲ್ಲಿನ ಬಹು ಅಪೂರ್ವ ಸಸ್ಯಸಂಕುಲ ಶ್ರೀತಾಳೆಯ ಸಂರಕ್ಷಣೆ ಕೊನಗೂ ಸಾಧ್ಯವಾಗಲಿಲ್ಲ. ಗುರುವಾರ ದುರುಳರು ಈ ಮರ ಧರೆಗುರುಳಿಸಿದ್ದು, ಮೌಢ್ಯಕ್ಕೆ ಬಲಿಯಾಯಿತೇ ಎಂಬ ಪ್ರಶ್ನೆ ವ್ಯಾಪಕವಾಗಿ ಜನರನ್ನು ಕಾಡತೊಡಗಿದೆ.

ಶ್ರೀತಾಳೆ ಮರ ಹೂ ಬಿಟ್ಟರೆ ಮನೆ ಯಜಮಾನನಿಗೆ ಹಾಗೂ ಊರಿಗೆ ಹಾನಿಯಾಗುತ್ತದೆ ಎಂಬ ನಂಬಿಕೆಯ ಹಿನ್ನೆಲೆಯಲ್ಲಿ ನ.೨೧ರಂದು ವಿವಿಧ ಪೂಜಾವಿಧಿಗಳನ್ನು ನೆರವೇರಿಸಿ ಶ್ರೀತಾಳೆಯನ್ನು ಕಡಿಯಲು ನಿರ್ಧರಿಸಲಾಗಿತ್ತು. ಈ ವಿಷಯ ವ್ಯಾಪಕ ಚರ್ಚೆಯಾಗಿ ಆಕ್ಷೇಪ ವ್ಯಕ್ತವಾಗಿತ್ತು. ಮರ ಪ್ರಬೇಧಗಳಲ್ಲಿ ಪಾವಿತ್ರ್ಯದ ಸಂಕೇತ ಎಂದು ನಂಬಲಾಗಿದ್ದ ಈ ಶ್ರೀತಾಳೆ ಮರವನ್ನು ರಕ್ಷಿಸುವಂತೆ ಉಡುಪಿ ಪ್ರಾಚ್ಯ ಸಂಚಯ ಸಂಶೋಧನ ಕೇಂದ್ರದ ನಿರ್ದೇಶಕ ಪ್ರೊ| ಎಸ್.ಎ. ಕೃಷ್ಣಯ್ಯ ಅವರು ಮೂಡಬಿದಿರೆ ಜೈನಮಠದ ಸ್ವಾಮೀಜಿಯವರನ್ನು ಭೇಟಿಯಾಗಿ ಜನರಲ್ಲಿ ಅರಿವು ಮೂಡಿಸಬೇಕು ಎಂದಿದ್ದರು. ಕರಿಮಣೇಲು ಜಾಗದ ಮಾಲಿಕರ ಜತೆಯೂ ದೂರವಾಣಿಯಲ್ಲಿ ಮಾತನಾಡಿದ್ದ ಅವರು ಮರವನ್ನು ಕಡಿಯದಿರುವಂತೆ ವಿನಂತಿಸಿದ್ದರು. ಅಲ್ಲದೇ ಉಡುಪಿಯಲ್ಲಿ ಪತ್ರಿಕಾಗೋಷ್ಠಿಯನ್ನೂ ಕರೆದು ಮರವನ್ನು ಸಂರಕ್ಷಿಸುವಂತೆ ಆಗ್ರಹಿಸಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು