ಮಂಗಳೂರು : ನಗರದ ಅಥೇನಾ ಆರೋಗ್ಯ ವಿಜ್ಞಾನ ಸಂಸ್ಥೆಯ ಮ್ಯಾನೇಜ್ಮೆಂಟ್ ಸಂಸ್ಥೆ ಯಲ್ಲಿ ಇಂದು ಬೆಳಿಗ್ಗೆ “ಗುಣಾತ್ಮಕ ಸಂಶೋಧನೆಯ ನೋಟ” ಕುರಿತು ವೆಬಿನಾರ್ ಅನ್ನು ಆಯೋಜಿಸಿದ್ದರು .
ದೀಪ ಬೆಳಗಿಸುವ ಮೂಲಕ ವೆಬಿನಾರನ್ನು ಉದ್ಘಾಟಿಸಿದರು . ಕಾಲೇಜಿನ ಉಪಪ್ರಾಂಶುಪಾಲೆ ಭಗಿನಿ ಐಲೀನ್ ಮಥಾಯಿಸ್ ನರ್ಸಿಂಗ್ ವಿಷಯದ ಮಹತ್ವವನ್ನು ವಿವರಿಸಿದರು. ನಂತರ ಅಧ್ಯಕ್ಷೀಯ ಭಾಷಣವನ್ನು ಅಥೇನಾ ಆರೋಗ್ಯ ವಿಜ್ಞಾನ ಸಂಸ್ಥೆಯ ಅಧ್ಯಕ್ಷರು ಶ್ರೀ. ಆರ್.ಎಸ್. ಶೆಟ್ಟಿಯನ್ ಅವರು ನಡೆಸಿಕೊಟ್ಟರು .
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ ಮಣಿಪಾಲ್ ಕಾಲೇಜ್ ಆಫ್ ನರ್ಸಿಂಗ್ ಡೀನ್, ಡಾ. ಜುಡಿತ್ ನೊರೊನ್ಹಾ ಅವರು ಗುಣಾತ್ಮಕ ಸಂಶೋಧನೆಯ ಬಗ್ಗೆ ವಿವರವಾಗಿ ವಿದ್ಯಾರ್ಥಿಗಳಿಗೆ ತಿಳಿಯಪಡಿಸಿದರು.
ಮಣಿಪಾಲ್ ಕಾಲೇಜ್ ಆಫ್ ನರ್ಸಿಂಗ್ ನ ಉಪನ್ಯಾಸಕರಾದ ಅನಿಲ್ ರಾಜ್ ಅವರು ದತ್ತಾಂಶ ಸಂಗ್ರಹ ವಿಧಾನಗಳು ಮತ್ತು ವಿಶ್ಲೇಷಣೆಯನ್ನು ಹೇಗೆ ಮಾಡಬಹುದು ಎಂಬುದಾಗಿ ತಿಳಿಸಿದರು ಹಾಗೂ ಭಾಗವಹಿಸಿದವರ ಪ್ರಶ್ನೆಗಳಿಗೆ ಉತ್ತರಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಸಂವಾದ ನಡೆಸಲಾಯಿತು. ಕಾಲೇಜಿನ ಪ್ರಾಂಶುಪಾಲೆ ಭಗಿನಿ ದೀಪಾ ಪೀಟರ್ ಗಣ್ಯರನ್ನು ಮತ್ತು ಭಾಗವಹಿಸಿದವರನ್ನು ಸ್ವಾಗತಿಸಿದರು.ಶ್ರೀಮತಿ ಶರ್ಲೆಟ್ ಡಿಸೋಜ ಸಂಘಟನಾ ಕಾರ್ಯದರ್ಶಿ ವಂದಿಸಿದರು. ಶ್ರೀಮತಿ ಅನಕ್ಲಿಟಾ ಡೊರಿನಾ ಮಿಸ್ಕ್ವಿತ್ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ವಿದ್ಯಾರ್ಥಿನಿಯರು ಹಾಗೂ ಉಪನ್ಯಾಸಕರು ವೇಬಿನಾರ್ ನಲ್ಲಿ ಭಾಗವಹಿಸಿದ್ದರು.