News Karnataka Kannada
Monday, April 29 2024
ಮಂಗಳೂರು

ಅಣಿಯೂರು : ವೈನ್‍ಶಾಪ್ ಸ್ಥಾಪನೆಗೆ ತೀವ್ರ ಆಕ್ರೋಶ

Local News
Photo Credit :

ಬೆಳ್ತಂಗಡಿ : ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ, ಅಣಿಯೂರು ಎಂಬಲ್ಲಿ ತೆರೆಯಲು ಉದ್ದೇಶಿಸಿರುವ ಬಾರ್ ಎಂಡ್ ರೆಸ್ಟೋರೆಂಟನ್ನು ಸ್ಥಗಿತಗೊಳಿಸಬೇಕು. ಈ ಬಾರ್ ಎಂಡ್ ರೆಸ್ಟೋರೆಂಟ್‍ನಿಂದಾಗಿ ಸ್ಥಳೀಯವಾಗಿ ಸಂಘ ಸಂಸ್ಥೆಗಳು, ಬಸದಿ, ಯೋಜನೆ ಹಾಗೂ ಗ್ರಾಮದ ಶೇ.80ಕ್ಕೂ ಮಿಕ್ಕಿದ ಜನರ ವಿರೋಧ ಇದೆ ಎಂಬುದು ತಿಳಿದು ಬಂದಿದ್ದು, ಈಗಾಗಲೇ ಸ್ಥಳೀಯರು ಇದರ ವಿರುದ್ಧವಾಗಿ ಹೋರಾಟ ನಡೆಸಿ ಅಬಕಾರಿ ಇಲಾಖೆಯ ಪ್ರತಿನಿಧಿಗಳಲ್ಲಿ ಮನವಿಯನ್ನು ನೀಡಿದರು.

ಯಾವುದೇ ಕಾರಣಕ್ಕೆ ಮದ್ಯದಂಗಡಿ ತೆರೆಯಲು ಅವಕಾಶ ಮಾಡಿಕೊಡುವುದಿಲ್ಲ ಎಂದು ಸ್ಥಳೀಯರು ಒಗ್ಗಟ್ಟಾಗಿದ್ದು, ಒಂದು ವೇಳೆ ಮದ್ಯದಂಗಡಿ ತೆರೆದಲ್ಲಿ ತೀವ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಈ ವಿಷಯವನ್ನು ಮನಗಂಡು ಜನಜಾಗೃತಿ ವೇದಿಕೆಯು ಇಂದು ನೆರಿಯ ವಲಯದ ಸಭೆಯನ್ನು ನಡೆಸಿ ಸಭೆಯಲ್ಲಿ ಈ ಕುರಿತಂತೆ ಚರ್ಚೆಯನ್ನು ನಡೆಸಿ ಸಭೆಯ ಬಳಿಕ ಸದಸ್ಯರೆಲ್ಲರೂ ಸೇರಿ ಇಂದು ನೆರಿಯ ಗ್ರಾಮ ಪಂಚಾಯತ್‍ಗೆ ಹೋಗಿ ಅಲ್ಲಿನ ಪಿಡಿಓ ಅಜಿತ್ ಕುಮಾರ್ ರವರಲ್ಲಿ ಮದ್ಯದಂಗಡಿ ತಡೆಹಿಡಿಯುವಂತೆ ಮನವಿಯನ್ನು ಸಲ್ಲಿಸಲಾಯಿತು. ವೈನ್ ಶಾಪ್‍ನ ವಿಚಾರದಂತೆ ಯಾವುದೇ ಕ್ರಮ ಜರುಗದೇ ಹೋದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಜನಜಾಗೃತಿ ವಲಯ ವೇದಿಕೆಯ ಅಧ್ಯಕ್ಷ ಅಶೋಕ್ ಕುಮಾರ್ ಜೈನ್ ಎಚ್ಚರಿಸಿದ್ದಾರೆ.

ಈ ಸಂದರ್ಭದಲ್ಲಿ ಜನಜಾಗೃತಿ ಪ್ರಾದೇಶಿಕ ಕಛೇರಿಯ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿ. ಪಾೈಸ್, ಬೆಳ್ತಂಗಡಿ ತಾಲೂಕು ಯೋಜನಾಧಿಕಾರಿ ಜಯಕರ ಶೆಟ್ಟಿ, ತಾಲೂಕು ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷ ಡಿ.ಎ. ರಹಿಮಾನ್, ವಲಯದ ಮಾಜಿ ಅಧ್ಯಕ್ಷ ನಂದಕುಮಾರ್, ಚಾರ್ಮಾಡಿ ಪಂಚಾಯತ್ ಅಧ್ಯಕ್ಷ ಕೆ.ವಿ. ಪ್ರಸಾದ್, ತಾಲೂಕು ಕೋ.ಅಪ್ಟ್ ಸದಸ್ಯರಾದ ಶರೀಫ್, ಓಬಯ್ಯ ಗೌಡ, ಮಿತ್ರಸೇನ ಇಂದ್ರ, ದೇವಣ್ಣ ಗೌಡ, ಮಾಧವ ಗೌಡ, ಮೇಲ್ವಿಚಾರಕರಾದ ರಾಜೇಶ್ ಜಿ.ಎನ್. ಹಾಗೂ ವಲಯ ಒಕ್ಕೂಟದ ಅಧ್ಯಕ್ಷರಾದ ಸತೀಶ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು