ಕಾಸರಗೋಡು: ಕುಂಬಳೆ ಸಮೀಪದ ಬೇಳ ಚೌಕಾರ್ ಪಿಲಿಪಳ್ಳದಲ್ಲಿ ಕೊಲೆಗೈದು ಶೌಚಾಲಯ ಹೊಂಡಕ್ಕೆ ಬೋರ್ ವೆಲ್ ಏಜೆಂಟ್ ರೋರ್ವರ ಮೃತ ದೇಹವನ್ನು ಇಂದು ಬೆಳಿಗ್ಗೆ ಮೇಲಕ್ಕೆತ್ತಲಾಯಿತು.
ಪಿಲಿಪಳ್ಳ ದ ಥೋಮಸ್ ಕ್ರಾಸ್ತ ಕೊಲೆಗೀಡಾದವರು. ಕೊಲೆಗೈದ ಬಳಿಕ ಗೋಣಿ ಚೀಲದಲ್ಲಿ ತುಂಬಿಸಿ ಹೊಂಡಕ್ಕೆ ತಳ್ಳಲಾಗಿತ್ತು. ತಲೆ, ಕೈ ಕಾಲಿನಲ್ಲಿ ಮಾರಣಾಂತಿಕವಾದ ಗಾಯಗಳು ಕಂಡು ಬಂದಿದೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆ ಬಳಿಕ ಸಂಬಂಧಿಕರಿಗೆ ಬಿಟ್ಟು ಕೊಡಲಿದೆ. ಘಟನಾ ಸ್ಥಳಕ್ಕೆ ಫಾರೆನ್ಸಿಕ್ ತಜ್ಞರು, ಶ್ವಾನ ದಳ ಆಗಮಿಸಿ ಮಾಹಿತಿ ಕಲೆ ಹಾಕಿದೆ.
ಕೃತ್ಯದ ಬಗ್ಗೆ ಹೊರರಾಜ್ಯ ಕಾರ್ಮಿಕರು ಹಾಗೂ ಕೆಲ ಶಂಕಿತರನ್ನು ಕೇಂದ್ರಿಕರಿಸಿ ತನಿಖೆ ನಡೆಸಲಾಗುತ್ತಿದೆ. ನಾಲ್ಕು ದಿನಗಳಿಂದ ಥೋಮಸ್ ನಾಪತ್ತೆಯಾಗಿದ್ದು, ಇದರಿಂದ ಪರಿಸರ ವಾಸಿಗಳು ಶೋಧ ನಡೆಸಿದಾಗ ಶೌಚಾಲಯ ಹೊಂಡದಿಂದ ದುರ್ವಾಸನೆ ಕಂಡು ಬಂದ ಹಿನ್ನಲೆಯಲ್ಲಿ ಬದಿಯಡ್ಕ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಪೊಲೀಸರು ಪರಿಶೀಲನೆ ನಡೆಸಿದಾಗ ಹೊಂಡದಲ್ಲಿ ಮೃತ ದೇಹ ಪತ್ತೆಯಾಗಿದೆ.