News Karnataka Kannada
Sunday, May 19 2024
ಕಾಸರಗೋಡು

ಶೌಚಾಲಯದ ಹೊಂಡದೊಳಗಿದ್ದ ಮೃತ ದೇಹವನ್ನು ಮೇಲಕ್ಕೆತ್ತಿದ ಪೊಲೀಸರು

Police lift dead body from inside toilet pit
Photo Credit : News Kannada
ಕಾಸರಗೋಡು: ಕುಂಬಳೆ ಸಮೀಪದ ಬೇಳ ಚೌಕಾರ್  ಪಿಲಿಪಳ್ಳದಲ್ಲಿ ಕೊಲೆಗೈದು ಶೌಚಾಲಯ ಹೊಂಡಕ್ಕೆ ಬೋರ್ ವೆಲ್ ಏಜೆಂಟ್ ರೋರ್ವರ ಮೃತ ದೇಹವನ್ನು ಇಂದು ಬೆಳಿಗ್ಗೆ ಮೇಲಕ್ಕೆತ್ತಲಾಯಿತು.
ಪಿಲಿಪಳ್ಳ ದ  ಥೋಮಸ್ ಕ್ರಾಸ್ತ  ಕೊಲೆಗೀಡಾದವರು. ಕೊಲೆಗೈದ ಬಳಿಕ ಗೋಣಿ ಚೀಲದಲ್ಲಿ  ತುಂಬಿಸಿ ಹೊಂಡಕ್ಕೆ ತಳ್ಳಲಾಗಿತ್ತು. ತಲೆ, ಕೈ ಕಾಲಿನಲ್ಲಿ ಮಾರಣಾಂತಿಕವಾದ ಗಾಯಗಳು ಕಂಡು ಬಂದಿದೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆ ಬಳಿಕ ಸಂಬಂಧಿಕರಿಗೆ ಬಿಟ್ಟು ಕೊಡಲಿದೆ.  ಘಟನಾ ಸ್ಥಳಕ್ಕೆ ಫಾರೆನ್ಸಿಕ್ ತಜ್ಞರು, ಶ್ವಾನ ದಳ ಆಗಮಿಸಿ ಮಾಹಿತಿ ಕಲೆ ಹಾಕಿದೆ.
ಕೃತ್ಯದ ಬಗ್ಗೆ ಹೊರರಾಜ್ಯ ಕಾರ್ಮಿಕರು ಹಾಗೂ ಕೆಲ ಶಂಕಿತರನ್ನು ಕೇಂದ್ರಿಕರಿಸಿ ತನಿಖೆ ನಡೆಸಲಾಗುತ್ತಿದೆ. ನಾಲ್ಕು ದಿನಗಳಿಂದ ಥೋಮಸ್ ನಾಪತ್ತೆಯಾಗಿದ್ದು, ಇದರಿಂದ ಪರಿಸರ ವಾಸಿಗಳು ಶೋಧ ನಡೆಸಿದಾಗ ಶೌಚಾಲಯ ಹೊಂಡದಿಂದ ದುರ್ವಾಸನೆ ಕಂಡು ಬಂದ ಹಿನ್ನಲೆಯಲ್ಲಿ  ಬದಿಯಡ್ಕ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಪೊಲೀಸರು ಪರಿಶೀಲನೆ ನಡೆಸಿದಾಗ ಹೊಂಡದಲ್ಲಿ ಮೃತ ದೇಹ ಪತ್ತೆಯಾಗಿದೆ.
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು