ಕಾಸರಗೋಡು: ಕೊಲೆ ಯತ್ನ ಸೇರಿದಂತೆ ಹತ್ತಕ್ಕೂ ಅಧಿಕ ಪ್ರಕರಣಗಳ ಆರೋಪಿಯನ್ನು ಹೊಸದುರ್ಗ ಠಾಣಾ ಪೊಲೀಸರು ಬಂಧಿಸಿದ್ದು, ಕಾಫಾ ಕಾಯ್ದೆಯನ್ನು ಹೂಡಿ ಕಣ್ಣೂರು ಸೆಂಟ್ರಲ್ ಜೈಲ್ ಗೆ ಸ್ಥಳಾಂತರಿಸಲಾಗಿದೆ.
ಹೊಸದುರ್ಗ ಬಲ್ಲಾದ ಮುಹಮ್ಮದ್ ಆಶಿಕ್ (26) ಬಂಧಿತ ಆರೋಪಿ. ಕೊಲೆ ಯತ್ನ, ಮಾದಕ ವಸ್ತು ಸಾಗಾಟ, ಕಳವು, ಲೂಟಿ ಸೇರಿದಂತೆ ಹತ್ತಕ್ಕೂ ಅಧಿಕ ಪ್ರಕರಣಗಳಲ್ಲಿ ಈತ ಶಾಮೀಲಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.