ಕಾಸರಗೋಡು: ಅಕ್ರಮ ಕೋವಿ ಮತ್ತು ಮದ್ದು ಗುಂಡು ಸಹಿತ ಇಬ್ಬರನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ. ಉದುಮ ಎರೋಲ್ ನ ನಿಖಿಲ್ (22) ಮತ್ತು ರಾಜೇಶ್ (33) ಬಂಧಿತರು.
ಇವರು ಸಂಚರಿಸುತ್ತಿದ್ದ ಪಿಕಪ್ ವ್ಯಾನ್ ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕುಂಬಳೆ ಆರಿಕ್ಕಾಡಿ ಸಮೀಪ ವಾಹನ ತಪಾಸಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಈ ದಾರಿಯಾಗಿ ಬಂದ ಪಿಕಪ್ ವ್ಯಾ ನ್ ನ್ನು ತಪಾಸಣೆ ನಡೆಸಿದಾಗ ಸೀಟಿ ನಡಿಯಲ್ಲಿ ಅಕ್ರಮ ಕೋವಿ ಮತ್ತು ಏಳು ಸಜೀವ ಗುಂಡು ಗಳು ಪತ್ತೆಯಾಗಿದೆ.
ಬೇಟೆಗಾರಿಕೆಗೆ ತೆರಳಿದ್ದರು ಎಂಬ ಶಂಕಿ ಸಲಾಗಿದೆ. ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.