News Karnataka Kannada
Monday, May 13 2024
ಕಾಸರಗೋಡು

ಕಾಸರಗೋಡು: ಪ್ರಿಯೇಶ್ ಕೊಲೆ ಪ್ರಕರಣ, ಇಬ್ಬರು ಆರೋಪಿಗಳು ಬಂಧನ

Kasargod: Two accused arrested in Priyesh murder case
Photo Credit : By Author

ಕಾಸರಗೋಡು: ತ್ರಿಕ್ಕರಿಪುರ ಮಟ್ಟಮ್ಮಲ್ ನ ಎಂ. ಪ್ರಿಯೇಶ್ ( ೩೨) ಎಂಬವರ ನಿಗೂಢ ಸಾವು ಕೊಲೆ ಎಂದು ಸಾಬೀತಾಗಿದ್ದು, ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರನ್ನು ಚಂದೇರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ತೃಕ್ಕರಿಪುರ ಪಾರಪ್ಪಾಡ್ ನ ಮುಹಮ್ಮದ್ ಶಬಾಸ್ ( ೨೨) ಮತ್ತು ಮುಹಮ್ಮದ್ ರಹನಾಸ್ ( ೨೩) ಬಂಧಿತರು. ಕೃತ್ಯದಲ್ಲಿ ನೆರವಾಗಿ ಶಾಮೀಲಾಗಿದ್ದ ಸಫ್ವಾನ್ ( ೨೫) ಸೇರಿದಂತೆ ಮೂವರು ತಲೆಮರೆಸಿಕೊಂಡಿದ್ದಾರೆ . ಆದಿತ್ಯವಾರ ರಾತ್ರಿ ಕೃತ್ಯ ನಡೆದಿತ್ತು.

ತಂಡವೊಂದು ಮೊಬೈಲ್ ಗೆ ಕರೆ ಮಾಡಿ ಪ್ರಿಯೇಶ್ ನನ್ನು ಕರೆಸಿದ್ದು ಬೈಕ್ ನಲ್ಲಿ ತೆರಳಿದ್ದ ಪ್ರಿಯೇಶ್ ಮರಳಿ ಬಂದಿರಲಿಲ್ಲ. ಈ ನಡುವೆ ಸೋಮವಾರ ಬೆಳಿಗ್ಗೆ ಮನೆ ಸಮೀಪ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಸಮೀಪ ಬೈಕ್ ಪತ್ತೆಯಾಗಿತ್ತು. ತಂಡವು ಅಪಹರಿಸಿ ಥಳಿಸಿ ಕೊಲೆಗೈದಿದ್ದು ಬಳಿಕ ಮೃತದೇಹವನ್ನು ತಂದು ಮನೆ ಬಳಿ ಎಸೆದು ಪರಾರಿಯಾಗಿದ್ದರು. ಮರದ ತುಂಡಿನಿಂದ ತಂಡವು ಥಳಿಸಿದ್ದು, ಮೃತಪಟ್ಟಿರುವುದಾಗಿ ಖಚಿತ ಗೊಂಡಿದ್ದರಿಂದ ಪ್ರಿಯೇಶ್ ನ ಬೈಕ್ ನಲ್ಲೆ ಮೃತದೇಹ ತಂದು ಎಸೆದು ತೆರಳಿದ್ದಾಗಿ ಬಂಧಿತರು ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ನಾಪತ್ತೆಯಾಗಿದ್ದ ಪ್ರಿಯೇಶ್ ನ ಮೊಬೈಲ್ ಫೋನ್ ಶಹಬಾಸ್ ನ ಮನೆಯಿಂದ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪ್ರಿಯೇಶ್ ಸಮೀಪದ ಮನೆಯೊಂದರ ಬಳಿ ಸಂಶಯಾಸ್ಪದ ವಾಗಿ ಕಂಡು ಬಂದಿದ್ದನೆನ್ನಲಾಗಿದ್ದು ಇದಕ್ಕಾಗಿ ಪ್ರಶ್ನಿಸಲು ಕರೆದೊಯ್ದು ಈ ಕೃತ್ಯ ನೆಯೆಡೆಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಶಹಬಾಸ್ ಬೆಂಗಳೂರಿನ ಹೋಟೆಲೊಂದರಲ್ಲಿ ನೌಕರನಾಗಿದ್ದನು. ರಹನಾಸ್ ಮಲೇಷ್ಯಾದಲ್ಲಿ ಉದ್ಯೋಗದಲ್ಲಿದ್ದು, ಇತ್ತೀಚೆಗೆ ಊರಿಗೆ ಬಂದಿದ್ದನು. ಕೊಲೆ ಗೀಡಾದ ಪ್ರಿಯೇಶ್ ಖಾಸಗಿ ಕಂಪೆನಿಯೊಂದರ ಚಾಲಕರಾಗಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು