ಕಾಸರಗೋಡು: ಲಾರಿ ಚಾಲಕನ ನಿಯಂತ್ರಣ ತಪ್ಪಿ ತೋಡಿಗೆ ಬಿದ್ದು ಓರ್ವ ಮೃತಪಟ್ಟ ಘಟನೆ ಇಂದು ಬೆಳಿಗ್ಗೆ ನೀಲೇಶ್ವರ ಪರಪಚ್ಚಾಲ್ ನಲ್ಲಿ ನಡೆದಿದೆ.
ಪಾಲಕ್ಕಾಡ್ ಮಣ್ಣರಕ್ಕಾಡ್ ನ ಹಬೀಬ್ ( 50) ಮೃತಪಟ್ಟವರು. ಚಾಲಕ ರಹೀಮ್ ಗಾಯ ಗೊಂಡಿದ್ದಾರೆ. ನೀಲೇಶ್ವರ ಕಡೆಗೆ ಸಿಮೆಂಟ್ ಹೇರಿಕೊಂಡು ತೆರಳುತ್ತಿದ್ದ ಲಾರಿ ಪರಪ್ಪಚ್ಚಾಲ್ ನ ಸೇತುವೆ ಯಿಂದ ತೋಡಿಗೆ ಬಿದ್ದಿದ್ದು, ಲಾರಿಯಲ್ಲಿ ಸಿಲುಕಿದ್ದ ಇಬ್ಬರನ್ನು ಪರಿಸರ ವಾಸಿಗಳು ಹಾಗೂ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಮೇಲಕ್ಕೆತ್ತಿ ಆಸ್ಪತ್ರೆಗೆ ತಲಪಿಸಿದರೂ ಹಬೀಬ್ ಮೃತಪಟ್ಟಿದ್ದರು.ನೀಲೇಶ್ವರ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.