News Karnataka Kannada
Tuesday, April 30 2024
ಮಂಗಳೂರು

 ಮಂಗಳೂರು: ಪತ್ರಿಕಾ ಭವನದ ಆವರಣದಲ್ಲಿ ಹಸಿರೇ ಉಸಿರು ಕಾರ್ಯಕ್ರಮ

Mangaluru
Photo Credit : News Kannada

ಮಂಗಳೂರು,ಜೂ.25; ನಗರದ  ಗಾಂಧಿನಗ ರ ಶಾಲಾ ಆವರಣ, ಪತ್ರಿಕಾ ಭವನದ ಆವರಣದಲ್ಲಿ ದ.ಕ ಜಿಲ್ಲಾ ಕಾರ್ಯನಿರತ  ಪತ್ರ ಕರ್ತರ ಸಂಘ ಅರಣ್ಯ ಇಲಾಖೆ ಮತ್ತು ಕೆಐಒಸಿಎಲ್  ಸಹಯೋಗದೊಂದಿಗೆ ಹಸಿರೇ ಉಸಿರು ಕಾರ್ಯಕ್ರಮದ ಮೂಲಕ  ಇಂದು ಹಣ್ಣಿನ ಗಿಡ ನೆಡಲಾಯಿತು.

ಕಾರ್ಯ ಕ್ರಮಕ್ಕೆ ಚಾಲನೆ ನೀಡಿ ಶಾಸಕ ವೇದವ್ಯಾಸ ಕಾಮತ್ ಮಾತನಾಡುತ್ತಾ, ಮನಪಾ ಪತ್ರಿಕಾ ಭವನ ಗಾಂಧಿ ನಗರ ಪರಿಸರದಲ್ಲಿ ಹಣ್ಣಿನ ಗಿಡಗಳನ್ನೊಳ ಗೊಂಡ  ಸಾಲು ಮರಗಳ ರಸ್ತೆ ಅಭಿವೃದ್ಧಿ ಪಡಿಸಲಾಗುವುದು ಎಂದು ತಿಳಿಸಿದರು.

ಶಾಸಕ ಡಾ.ಭರತ್ ಶೆಟ್ಟಿ ಮಾತನಾಡುತ್ತಾ ಪತ್ರಕರ್ತರ  ಸಂಘದ ಮೂಲಕ ಪರಿಸರ ಸಂರಕ್ಷಣೆ ಯ ಕಾರ್ಯ ದಲ್ಲಿ ಸರಕಾರದ ಜೊತೆ ಕೈ ಜೋಡಿಸುತ್ತಿರುವುದು ಶ್ಲಾಘ ನೀಯ ಎಂದು ಶುಭ ಹಾರೈಸಿದರು. ಸಮಾರಂಭದಲ್ಲಿ ಅತಿಥಿ ಯಾಗಿ ಭಾಗವಹಿಸಿದ ಕೆಐಒಸಿಎಲ್ ನ ಹಿರಿಯ ಮಹಾ ಪ್ರಬಂಧ ಕ ರಾಮಕೃಷ್ಣ ಮಾತನಾಡುತ್ತಾ,ಅರಣ್ಯ ಇಲಾಖೆ ಮತ್ತು ಪತ್ರಕರ್ತರ ಸಂಘದ ಸಹಕಾದೊಂದಿಗೆ  ಮೂರು ಕಡೆ ಮಿಯಾವಾಕಿ ಅರಣ್ಯ  ನಿರ್ಮಿಸಲು ಕೆಐಒಸಿಎಲ್ ವತಿಯಿಂದ 15ಲಕ್ಷ ರೂ ಕೊಡುಗೆ ನೀಡುವುದಾಗಿ ತಿಳಿಸಿದ್ದಾರೆ.

ಮನಪಾ ಸದಸ್ಯೆ ಸಂಧ್ಯಾ ಆಚಾರ್, ಮಂಗಳೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ದಿನೇಶ್ ಕುಮಾರ್, ಸಹಾಯ ಅರಣ್ಯ ಸಂರಕ್ಷಣಾ ಧಿಕಾರಿ ಸುಬ್ರಹ್ಮಣ್ಯ ರಾವ್ ,ವಲಯ  ಅರಣ್ಯಾಧಿಕಾ ರಿ ಪ್ರಶಾಂತ್ ಪೈ, ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟದ ಅಧ್ಯಕ್ಷ ಸ್ವರ್ಣ ಸುಂದರ್ ,ಪರಿಸರ ಕಾರ್ಯ ಕರ್ತ ಸಂದೇಶ್,ಮಾಜಿ ಮೇಯರ್ ಪುರಂದರ ದಾಸ್ ಕೂಳೂರು, ದ.ಕ. ಜಿಲ್ಲಾ ಕಾರ್ಯ ನಿರತ ಪತ್ರ ಕರ್ತರ ಸಂಘದ ಅಧ್ಯಕ್ಷ ಶ್ರೀ ನಿವಾಸ ನಾಯಕ್ ಇಂದಾಜೆ ಅಧ್ಯಕ್ಷ ತೆ ವಹಿಸಿದ್ದರು.

ಕೆಐಒಸಿಎಲ್ ನ ಹಿರಿಯ ಪ್ರಬಂಧಕ  ಮುರುಗೇಶ್ ,ಗಾಂಧಿ ನಗರದ ಉನ್ನತೀಕ ರಿಸಿದ  ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾದ  ಯಶೋಧ .ಬಿ ಮತ್ತು ದ.ಕ ಜಿಲ್ಲಾ ಕಾರ್ಯ ನಿರತ ಪತ್ರ ಕರ್ತರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ದ.ಕ ಜಿಲ್ಲಾ ಕಾರ್ಯ ನಿರತ  ಪತ್ರಕರ್ತ ರ  ಸಂಘದ ಪ್ರಧಾನ ಕಾರ್ಯ ದರ್ಶಿ ಜಿತೇಂದ್ರ ಕುಂದೇ ಶ್ವರ ಕಾರ್ಯಕ್ರಮ ನಿರೂಪಿಸಿದರು.

ಇದೇ ಸಂದರ್ಭದಲ್ಲಿ ಗಾಂಧಿ ನಗರ ಶಾಲಾ ವಿದ್ಯಾರ್ಥಿಗಳಿಗೆ ಕೆಐಒಸಿಎಲ್ ವತಿಯಿಂದ ಮಾಸ್ಕ್ ಹಾಗೂ ಅರಣ್ಯ ಇಲಾಖೆಯ ವತಿಯಿಂದ ಗಿಡಗಳ ಬೀಜಗಳನ್ನು ವಿತರಿಸಲಾಯಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
11671
Media Release

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು