ಕಾಸರಗೋಡು: ಕಣಜದ ಹುಳುಗಳ ದಾಳಿಯಿಂದ ಪೈಂಟಿಂಗ್ ಕಾರ್ಮಿಕ ವ್ಯಕಿಯೋರ್ವ ಮೃತಪಟ್ಟ ದಾರುಣ ಘಟನೆ ಬುಧವಾರ ಮಧ್ಯಾಹ್ನ ಚಿತ್ತಾರಿ ಕಾಲ್ ನಲ್ಲಿ ನಡೆದಿದೆ.
ಚಿತ್ತಾರಿಕಾಲ್ ಕಂಬಲ್ಲೂರಿನ ಬಿಟೋ ಜೋಸೆಫ್ (35) ಮೃತಪಟ್ಟವರು. ಸಂಬಂಧಿಕ ರೋರ್ವರ ಮನೆ ಯಲ್ಲಿ ಈ ಘಟನೆ ನಡೆದಿದೆ. ಪೈಂಟಿಂಗ್ ಕೆಲಸದ ಸಂದರ್ಭದಲ್ಲಿ ಜೋಸೆಫ್ ರವರ ಮೇಲೆ ಕಣಜದ ಹುಳುಗಳು ದಾಳಿ ನಡೆಸಿದ್ದು, ಮನೆಯವರು ಹಾಗೂ ಪರಿಸರವಾಸಿಗಳು ಪರಿಯಾರಂನ ವೈದ್ಯಕೀಯ ಕಾಲೇಜು ಆಸ್ಪತ್ತೆಗೆ ತಲಪಿಸಿದರೂ ಜೀವ ಉಳಿಸಲಾಗಲಿಲ್ಲ.