ಕುಂದಾಪುರ: ರಾಜ್ಯದಲ್ಲೇ ತೀವ್ರ ಕುತೂಹಲ ಮೂಡಿಸಿದ್ದ ಬೈಂದೂರು ವಿಧಾನಸಭಾ ಕ್ಷೇತ್ರದ ಟಿಕೆಟ್ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಕ್ರಿಯ ಕಾರ್ಯಕರ್ತ,ಬಿಜೆಪಿ ಪಕ್ಷದ ಉಡುಪಿ ಜಿಲ್ಲಾ ಉಪಾಧ್ಯಕ್ಷ ಬ್ಯೆಂದೂರು ತಾಲೂಕಿನ ಬಿಜೂರು ಗ್ರಾಮದ ಗಂಟಿಹೊಳೆ ನಿವಾಸಿ ಯುವ ಮುಖಂಡ ಗುರುರಾಜ್ ಗಂಟಿಹೊಳೆಗೆ ದೊರೆತ್ತಿದೆ.
ಬೈಂದೂರು ಕ್ಷೇತ್ರದ ಹಾಲಿ ಶಾಸಕ ಬಿ.ಎಂ ಸುಕುಮಾರ್ ಶೆಟ್ಟಿಗೆ ಟಿಕೆಟ್ ಮಿಸ್ ಆಗಿದೆ. ಸುಕುಮಾರ್ ಶೆಟ್ಟಿ ಅವರು ಮೂರನೇ ಬಾರಿಗೆ ಬೈಂದೂರು ಕ್ಷೇತ್ರದಲ್ಲಿ ಸ್ಪರ್ಧಿಸಲು ಇಚ್ಚೆ ವ್ಯಕ್ತಪಡಿಸಿ ಟಿಕೆಟ್ ಗಾಗಿ ರಾಜ್ಯ ನಾಯಕರ ಮೂಲಕ ಅತೀವ ಒತ್ತಡ ಹೇರಿದ್ದರು ಅವರ ಯಾವುದೇ ರೀತಿಯ ತಂತ್ರಗಾರಿಕೆ ರಾಷ್ಟ್ರೀಯ ನಾಯಕರು ಸೊಪ್ಪು ಹಾಕಲಿಲ್ಲ.
ಬೈಂದೂರು,ಕುಂದಾಪುರ, ಉಡುಪಿ,ಕಾಪು ಕ್ಷೇತ್ರದಲ್ಲಿ ಹೊಸ ಮುಖಗಳಿಗೆ ಮನ್ನಣೆ ಹಾಕಿದ ಬಿಜೆಪಿ ಹೊಸ ತಂತ್ರಗಾರಿಕೆಯೊಂದಿಗೆ ಚುನಾವಣೆಗೆ ಸಜ್ಜಾಗಿದೆ.
ಮೊದಲ ಬಾರಿ ಚುನಾವಣೆಯನ್ನು ಎದುರಿಸುತ್ತಿರುವ ಗುರುರಾಜ್ ಗಂಟಿಹೊಳೆ ಅವರು ಬೈಂದೂರು ಕ್ಷೇತ್ರದಲ್ಲಿ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಎದುರು ಸ್ಪರ್ಧೆ ಮಾಡಲಿದ್ದಾರೆ.