ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬುಧವಾರ ರಾತ್ರಿ ಬಿಡುಗಡೆ ಮಾಡಿದೆ. ಎರಡನೇ ಪಟ್ಟಿಯಲ್ಲೂ ಜಗದೀಶ್ ಶೆಟ್ಟರ್ ಹೆಸರು ಕಂಡುಬಂದಿಲ್ಲ. ಬುಧವಾರವಷ್ಟೇ ಅವರು ದೆಹಲಿಗೆ ತೆರಳಿ ಹೈಕಮಾಂಡ್ ಭೇಟಿಯಾಗಿ ಮಾತುಕತೆ ನಡೆಸಿದ್ದರು. ಉಳಿದಂತೆ ಮೈಸೂರಿನ ಕೆಆರ್ ಕ್ಷೇತ್ರದ ಟಿಕೆಟ್ ಘೋಷಣೆಯಾಗಿಲ್ಲ. ಇದು ಹಾಲಿ ಶಾಸಕ ಎಸ್ಎ ರಾಮದಾಸ್ ಪ್ರತಿನಿಧಿಸುವ ಕ್ಷೇತ್ರ.
ಕರಾವಳಿಯಲ್ಲಿ ಬೈಂದೂರು ಶಾಸಕ ಸುಕುಮಾರ ಶೆಟ್ಟಿ ಅವರಿಗೆ ಟಿಕೇಟ್ ನಿರಾಕರಿಸಲಾಗಿದ್ದು, ಸಂಘ ಪರಿವಾರದ ಮುಂಚೂಣಿ ಮುಖಂಡ ಗುರುರಾಜ್ ಗಂಟಿಹೊಳೆ ಅವರಿಗೆ ಟಿಕೇಟ್ ನೀಡಲಾಗಿದೆ. ಮಲೆನಾಡಿನ ಮಡಿಲಲ್ಲಿರುವ ಮೂಡಿಗೆರೆಯಿಂದ ಕುಮಾರಸ್ವಾಮಿ ಅವರ ಬದಲಿಗೆ ದೀಪಕ್ ದೊಡ್ಡಯ್ಯ ಅವರಿಗೆ ಟಿಕೇಟ್ ನೀಡಲಾಗಿದೆ. ದೀಪಕ್ ಸಿ.ಟಿ. ರವಿ ಬೆಂಬಲಿಗರಾಗಿರುವುದನ್ನು ನಾವು ಇಲ್ಲಿ ಮನಗಾಣಬಹುದು.
ಇಂದು ಬಿಡುಗಡೆಯಾದ ಪಟ್ಟಿಯಲ್ಲಿರುವ ಅಭ್ಯರ್ಥಿಗಳ ವಿವರ ಹೀಗಿದೆ
ದೇವರ ಹಿಪ್ಪರಗಿ: ಸೋಮನಗೌಡ ಪಾಟೀಲ್
ಬಸವನ ಬಾಗೇವಾಡಿ: ಎಸ್. ಕೆ. ಬೆಳ್ಳುಬ್ಬಿ
ಇಂಡಿ: ಕಸಗೌಡ ಬಿರಾದರ್
ಗುರುಮಿಟ್ಕಲ್: ಲಲಿತಾ
ಭಾಲ್ಕಿ: ಪ್ರಕಾಶ್ ಖಂಡ್ರೆ
ಗಂಗಾವತಿ: ಪರಣ್ಣ ಮುನವಳ್ಳಿ
ಕಲಘಟಗಿ: ನಾಗರಾಜ್ ಛಬ್ಬಿ
ಮಾಯಕೊಂಡ: ಬಸವರಾಜ್ ನಾಯಕ್
ಮೂಡಿಗೆರೆ: ದೀಪಕ್ ದೊಡ್ಡಯ್ಯ
ಅರಸೀಕರೆ: ಬಸವರಾಜು
ಗುಬ್ಬಿ: ದಿಲೀಪ್ ಕುಮಾರ್
ಬೈಂದೂರು: ಗುರುರಾಜ್ ಗಂಟಿಹೊಳೆ