ಕಾಸರಗೋಡು : ಜಿಲ್ಲೆಯಲ್ಲಿ ಬುಧವಾರವೂ ಭಾರೀ ಮಳೆ ಸುರಿದ್ದಿದ್ದು , ಮಂಜೇಶ್ವರದದ ಹೊಸಂಗಡಿಯಲ್ಲಿ 20 ಮನೆಗಳಿಗೆ ನೆರೆ ನೀರು ನುಗ್ಗಿದೆ . ವರ್ಕಾಡಿಯಲ್ಲಿ ಕಾರ್ಮಿಕರೋರ್ವರು ತೋಟದ ಕೆರೆಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ.
ವರ್ಕಾಡಿ ಯ ಮೌರಿಸ್ ಡಿ ಸೋಜ ( ೫೨) ಮೃತಪಟ್ಟವರು. ಬುಧವಾರ ಸಂಜೆ ತೋಟದ ಕೆರೆಗೆ ಬಿದ್ದಿದ್ದು, ಉಪ್ಪಳದಿಂದ ಆಗಮಿಸಿದ ಅಗ್ನಿಶಾಮಕ ದಳದ ಸಿಬಂದಿಗಳು ಮೃತದೇಹವನ್ನು ಮೇಲಕ್ಕೆತ್ತಿದರು.
ಮಂಜೇಶ್ವರ ಹೊಸಂಗಡಿಯಲ್ಲಿ ೨೦ ಮನೆಗಳಿಗೆ ನೆರೆ ನೀರು ನುಗ್ಗಿದ್ದು , ನಾಗರಿಕರು ಹಾಗೂ ಅಗ್ನಿಶಾಮಕ ದಳದ ಸಿಬಂದಿಗಳು ನೂರಕ್ಕೂ ಅಧಿಕ ಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದರು. ಭಾರೀ ಮಳೆ ಮುಂದುವರಿತ್ತಿರುವುದರಿಂದ ಜಿಲ್ಲೆಯ ಬಹುತೇಕ ಪ್ರದೇಶಗಳಲ್ಲಿ ಪ್ರವಾಹ ಸ್ಥಿತಿ ಉಂಟಾಗಿದೆ.
ಮಧೂರು ಮಧನಂತೇಶ್ವರ ಸಿದ್ದಿ ವಿನಾಯಕ ದೇವಸ್ಥಾನ , ಮೀ೦ಜ ಬಳ್ಳ೦ಕೂಡ್ಲು ಪಾಡಂಗರ ಭಗವತಿ ಕ್ಷೇತ್ರ ಮೊದಲಾದೆಡೆ ಗಳಲ್ಲಿ ನೀರು ನುಗ್ಗಿದೆ. ಉಪ್ಪಳ ಹೊಳೆ ಉಕ್ಕಿ ಹರಿಯುತ್ತಿರುವುದರಿಂದ ಮೀಂಜ ಪಂಚಾಯತ್ ವ್ಯಾಪ್ತಿಯ ಹಲವು ಮನೆಗಳಿಗೆ ನೀರು ನುಗ್ಗಿದ್ದು, ಎಕರೆ ಗಟ್ಟಲೆ ಕೃಷಿ ಹಾನಿ ಉಂಟಾಗಿದೆ . ಕೊಡಂಗೆ , ಮಜಿ ಬೈಲ್ ನಲ್ಲಿ ಹಲವು ಮನೆಗಳಿಗೆ ನೆರೆ ನೀರು ನುಗ್ಗಿದ್ದು, ಕೃಷಿ ಹಾನಿಯೂ ಉಂಟಾಗಿದೆ.