News Karnataka Kannada
Sunday, April 28 2024
ಕಾಸರಗೋಡು

ಕಾಸರಗೋಡು| ಭಾರೀ ಮಳೆ: ಹಲವೆಡೆ ಹಾನಿ

Heavy rains lash Tamil Nadu, one dead
Photo Credit :

ಕಾಸರಗೋಡು : ಜಿಲ್ಲೆಯಲ್ಲಿ ಬುಧವಾರವೂ ಭಾರೀ ಮಳೆ ಸುರಿದ್ದಿದ್ದು ,  ಮಂಜೇಶ್ವರದದ ಹೊಸಂಗಡಿಯಲ್ಲಿ 20 ಮನೆಗಳಿಗೆ ನೆರೆ ನೀರು ನುಗ್ಗಿದೆ . ವರ್ಕಾಡಿಯಲ್ಲಿ ಕಾರ್ಮಿಕರೋರ್ವರು ತೋಟದ ಕೆರೆಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ.

ವರ್ಕಾಡಿ ಯ ಮೌರಿಸ್  ಡಿ ಸೋಜ ( ೫೨) ಮೃತಪಟ್ಟವರು. ಬುಧವಾರ ಸಂಜೆ ತೋಟದ ಕೆರೆಗೆ  ಬಿದ್ದಿದ್ದು, ಉಪ್ಪಳದಿಂದ ಆಗಮಿಸಿದ  ಅಗ್ನಿಶಾಮಕ ದಳದ ಸಿಬಂದಿಗಳು  ಮೃತದೇಹವನ್ನು ಮೇಲಕ್ಕೆತ್ತಿದರು.

ಮಂಜೇಶ್ವರ ಹೊಸಂಗಡಿಯಲ್ಲಿ ೨೦ ಮನೆಗಳಿಗೆ ನೆರೆ ನೀರು ನುಗ್ಗಿದ್ದು ,  ನಾಗರಿಕರು  ಹಾಗೂ  ಅಗ್ನಿಶಾಮಕ ದಳದ   ಸಿಬಂದಿಗಳು  ನೂರಕ್ಕೂ ಅಧಿಕ ಮಂದಿಯನ್ನು ಸುರಕ್ಷಿತ  ಸ್ಥಳಕ್ಕೆ  ಸ್ಥಳಾಂತರಿಸಿದರು. ಭಾರೀ ಮಳೆ ಮುಂದುವರಿತ್ತಿರುವುದರಿಂದ ಜಿಲ್ಲೆಯ ಬಹುತೇಕ ಪ್ರದೇಶಗಳಲ್ಲಿ ಪ್ರವಾಹ ಸ್ಥಿತಿ ಉಂಟಾಗಿದೆ.

ಮಧೂರು ಮಧನಂತೇಶ್ವರ ಸಿದ್ದಿ ವಿನಾಯಕ ದೇವಸ್ಥಾನ , ಮೀ೦ಜ  ಬಳ್ಳ೦ಕೂಡ್ಲು ಪಾಡಂಗರ ಭಗವತಿ ಕ್ಷೇತ್ರ  ಮೊದಲಾದೆಡೆ ಗಳಲ್ಲಿ ನೀರು ನುಗ್ಗಿದೆ. ಉಪ್ಪಳ ಹೊಳೆ ಉಕ್ಕಿ ಹರಿಯುತ್ತಿರುವುದರಿಂದ  ಮೀಂಜ ಪಂಚಾಯತ್ ವ್ಯಾಪ್ತಿಯ ಹಲವು ಮನೆಗಳಿಗೆ ನೀರು ನುಗ್ಗಿದ್ದು, ಎಕರೆ ಗಟ್ಟಲೆ ಕೃಷಿ ಹಾನಿ ಉಂಟಾಗಿದೆ . ಕೊಡಂಗೆ , ಮಜಿ ಬೈಲ್  ನಲ್ಲಿ  ಹಲವು ಮನೆಗಳಿಗೆ ನೆರೆ ನೀರು ನುಗ್ಗಿದ್ದು, ಕೃಷಿ ಹಾನಿಯೂ ಉಂಟಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು