ಬಂಟ್ವಾಳ : ಕಳೆದ ಎರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಗಾಳಿ ಸಹಿತ ಮಳೆಗೆ ಮಣ್ಣು ಸಡಿಲಗೊಂಡು ತಾಲೂಕಿನ ಅನೇಕ ಕಡೆಗಳಲ್ಲಿ ಮಳೆಹಾನಿ ಸಂಭವಿಸಿದ್ದು, ಲಕ್ಷಾಂತರ ರೂ ನಷ್ಟ ಸಂಭವಿಸಿದೆ. ಜತೆಗೆ ಕೃಷಿ ಚಟುವಟಿಗಳಿಗೂ ಹಾನಿಯಾಗಿದೆ. ತಡೆಗೋಡೆ ಜರಿದು ಬಿದ್ದು ಹಾನಿಯಾದ ಘಟನೆ ಪುರಸಭಾ ವ್ಯಾಪ್ತಿಯ ಬಿ.ಮೂಡ ಗ್ರಾಮದ ಕಾಮಾಜೆ ಎಂಬಲ್ಲಿ ನಡೆದಿದೆ.
ಕಾಮಾಜೆ ನಿವಾಸಿ ಸರೋಜಿನಿ ಕುಲಾಲ್ ಎಂಬವರ ಮನೆಯ ಸಮೀಪದಲ್ಲಿ ಇದ್ದ ಕೆಂಪು ಕಲ್ಲಿನ ತಡೆಗೋಡೆ ಜರಿದು ಬಿದ್ದ ಪರಿಣಾಮ ಮನೆಗೆ ಹಾನಿಯಾಗಿದೆ. ಮನೆಯಂಗಳದಲ್ಲಿ ನಿಲ್ಲಿಸಲಾಗಿದ್ದ ದ್ವಿಚಕ್ರವಾಹನ ಸಂಪೂರ್ಣ ಜಖಂ ಗೊಂಡಿದೆ.
ಸ್ಥಳಕ್ಕೆ ಪುರಸಭಾ ಮುಖ್ಯಾಧಿಕಾರಿ ಸ್ವಾಮಿ, ಬಿ.ಮೂಡ ಕಂದಾಯ ನಿರೀಕ್ಷಕ ವಿಜಯ, ಸ್ಥಳೀಯ ಬಿಜೆಪಿ ಪ್ರಮುಖರಾದ ಕೇಶವ ದೈಪಲ, ಭಾಸ್ಕರ ಟೈಲರ್ ಬೇಟಿ ನೀಡಿದ್ದಾರೆ.
ಮಿತ್ತಕಟ್ಟೆ ಚೋಮ ಮೂಲ್ಯರ ಮನೆ ಹಿಂಭಾಗದ ಗುಡ್ಡ ಕುಸಿದು ಮನೆ ಶೀಟುಗಳಿಗೆ ಹಾನಿಯಾಗಿದೆ. ಸಜೀಪ ಮೂಡ ಕಂಚಿಲ ನಿವಾಸಿ ಶಮೀಮ ಅವರ ಮನೆ ಹಿಂಭಾಗದ ಗೋಡೆ ಕುಸಿದು ಭಾಗಶಃ ಹಾನಿಯಾಗಿದೆ. ಬಂಟ್ವಾಳ ತಾಲೂಕು ಗೋಳ್ತಮಜಲು ಗ್ರಾಮದ ವಸಂತ ಅವರ ಮನೆ ಹತ್ತಿರದ ತಡೆಗೋಡೆ ಜರಿದು ಹಾನಿಯಾಗಿದೆ. ನರಿಕೊಂಬು ಗ್ರಾಮದ ಊಜೊಟ್ಟು ಎಂಬಲ್ಲಿ ರಸ್ತೆಗೆ ಮಣ್ಣು ಕುಸಿದಿದೆ. ಸಾಲೆತ್ತೂರು ಗ್ರಾಮದ ಕೊಡಂಗಾಯಿ ಎಂಬಲ್ಲಿ ರಸ್ತೆಗೆ ಗುಡ್ಡ ಕುಸಿದು ರಸ್ತೆ ಬಂದ್ ಅಗಿದೆ. ಮಂಚಿ ಗ್ರಾಮದ ಪತ್ತುಮುಡಿ ರಹೀನಾ ಅವರ ಮನೆಯ ಹಿಂಬದಿ ಗುಡ್ಡ ಕುಸಿದು ಮನೆಯ ಗೋಡೆ ಕುಸಿಯುವ ಹಂತದಲ್ಲಿದೆ.
ಮಂಚಿ ಗ್ರಾಮದ ಪತ್ತುಮುಡಿ ಗ್ರಾಮದ ಮಹಮ್ಮದ್ ಎಂಬವರ ಮನೆಯ ಹಿಂಬದಿ ಗೋಡೆ ಕುಸಿದು ಮನೆಗೆ ಹಾನಿ, ಮಂಚಿ ಗ್ರಾಮದ ಪತ್ತುಮುಡಿ ಅವ್ವಮ್ಮ ಅವರ ಮನೆ ಹಿಂಬದಿ ಗೋಡೆ ಕುಸಿದು ಮನೆಗೆ ಹಾನಿ.ಮಂಚಿ ಗ್ರಾಮದ ಪತ್ತುಮುಡಿ ಅಯಿಶಮ್ಮ ಎಂಬವರ ಮನೆಗೆ ತಿರುಗುವ ತಡೆಗೋಡೆ ಕುಸಿದು ಮನೆಗೆ ಹಾನಿ, ಮಂಚಿ ಗ್ರಾಮದ ಪತ್ತುಮುಡಿ ಎಂಬಲ್ಲಿ ವಿಠಲ ಪ್ರಭು ಎಂಬವರ ಮನೆಯ ಹಿಂಬದಿ ಗೋಡೆ ಕುಸಿದು ಮನೆಗೆ ಹಾನಿ,ಮಂಚಿ ಗ್ರಾಮದ ನೀರ್ ಬೈಲು ಎಂಬಲ್ಲಿ ಹಮೀದ್ ಅವರ ತೋಟಕ್ಕೆ ಕೃತಕ ನೀರು ನುಗ್ಗಿ ಕೃಷಿಗೆ ಹಾನಿ, ಮಂಚಿ ಗ್ರಾಮದ ಪುರುಷೋತ್ತಮ ಎಂಬವರ ಮನೆಯ ಅವರಣ ಗೋಡೆ ಜರಿದು ಬಿದ್ದು ಕೃಷಿಗೆ ಹಾನಿಯಾಗಿದೆ. ಮಾಣಿ ಗ್ರಾಮದ ಉಷಾ ಶೆಟ್ಟಿ ಅವರ ಮನೆಯ ಪೂರ್ತಿ ನೀರು ಅವರಿಸಿದ