News Karnataka Kannada
Sunday, May 19 2024
ಮಂಗಳೂರು

ಬೆಳ್ತಂಗಡಿ: ಅಲ್ಪ ಕಾಲದ ಅನಾರೋಗ್ಯದಿಂದ ರಾಹುಲ್‌ ವರ್ಮ ಬಳ್ಳಾಲ್ ನಿಧನ

Rahul Varma Ballal passes away after a brief illness
Photo Credit :

ಬೆಳ್ತಂಗಡಿ: ಬೆಳ್ತಂಗಡಿ ಜೈನ ಪೇಟೆಯಲ್ಲಿರುವ ರತ್ನತ್ರಯ ತೀರ್ಥಕ್ಷೇತ್ರದ ಅನುವಂಶೀಯ ಆಡಳಿತ ಮೊಕ್ತೇಸರ ಕೆ. ಜಯವರ್ಮರಾಜ ಬಳ್ಳಾಲ್ ಮತ್ತು ವಿನಯಾ ಜೆ. ಬಳ್ಳಾಲ್ ದಂಪತಿಯ ಮಗ ರಾಹುಲ್‌ವರ್ಮ ಬಳ್ಳಾಲ್ (೪೯) ಅಲ್ಪ ಕಾಲದ ಅನಾರೋಗ್ಯದಿಂದ ಬುಧವಾರ ಮಂಗಳೂರಿನಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ ಪತ್ನಿ ಡಾ. ಪ್ರೀತಿ ಬಳ್ಳಾಲ್ ಮತ್ತು ಮಗ ಇದ್ದಾರೆ.

ಆಕರ್ಷಕ ವ್ಯಕ್ತಿತ್ವವನ್ನು ಹೊಂದಿದ್ದ ರಾಹುಲ್‌ವರ್ಮ ಬಳ್ಳಾಲ್ ಸರಳ, ಸಜ್ಜನಿಕೆಯ ವ್ಯಕ್ತಿಯಾಗಿದ್ದು, ಕೊಡುಗೈ ದಾನಿಯಾಗಿ ಸ್ನೇಹಜೀವಿಯಾಗಿದ್ದರು. ಕಾನೂನು ಪದವೀಧರರಾಗಿದ್ದ ಅವರು ಕೃಷಿ, ವ್ಯವಹಾರ, ಹೋಟೆಲ್ ಉದ್ಯಮ, ಹೈನುಗಾರಿಕೆಯಲ್ಲಿ ಪರಿಣತರು.

ಬಳ್ಳಾಲ್ ಮನೆತನದ ದಾನ ಧರ್ಮಾದಿ ಸತ್ಕಾರ್ಯಗಳನ್ನು, ಪೂಜೆಗಳನ್ನು, ಧಾರ್ಮಿಕ ಪರಂಪರೆಯನ್ನು ಶ್ರದ್ಧಾ-ಭಕ್ತಿಯಿಂದ ನಡೆಸಿಕೊಂಡು ಬಂದ ಆದರ್ಶ ವ್ಯಕ್ತಿಯಾಗಿ ಅವರು ಚಿರಪರಿಚಿತರು.
ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್, ಶಾಸಕ ಹರೀಶ್ ಪೂಂಜ ಅಂತಿಮ ನಮನದೊಂದಿಗೆ ಶ್ರದ್ಧಾಂಜಲಿ ಅರ್ಪಿಸಿದರು. ಸಬರಬೈಲ್‌ನಲ್ಲಿ ಅವರ ಮನೆಯ ಬಳಿ ಧಾರ್ಮಿಕ  ವಿಧಿ ವಿಧಾನಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲಾಯಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 5 / 5. Vote count: 1

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು