ಬೆಳ್ತಂಗಡಿ: ಬೆಳ್ತಂಗಡಿ ಜೈನ ಪೇಟೆಯಲ್ಲಿರುವ ರತ್ನತ್ರಯ ತೀರ್ಥಕ್ಷೇತ್ರದ ಅನುವಂಶೀಯ ಆಡಳಿತ ಮೊಕ್ತೇಸರ ಕೆ. ಜಯವರ್ಮರಾಜ ಬಳ್ಳಾಲ್ ಮತ್ತು ವಿನಯಾ ಜೆ. ಬಳ್ಳಾಲ್ ದಂಪತಿಯ ಮಗ ರಾಹುಲ್ವರ್ಮ ಬಳ್ಳಾಲ್ (೪೯) ಅಲ್ಪ ಕಾಲದ ಅನಾರೋಗ್ಯದಿಂದ ಬುಧವಾರ ಮಂಗಳೂರಿನಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ ಪತ್ನಿ ಡಾ. ಪ್ರೀತಿ ಬಳ್ಳಾಲ್ ಮತ್ತು ಮಗ ಇದ್ದಾರೆ.
ಆಕರ್ಷಕ ವ್ಯಕ್ತಿತ್ವವನ್ನು ಹೊಂದಿದ್ದ ರಾಹುಲ್ವರ್ಮ ಬಳ್ಳಾಲ್ ಸರಳ, ಸಜ್ಜನಿಕೆಯ ವ್ಯಕ್ತಿಯಾಗಿದ್ದು, ಕೊಡುಗೈ ದಾನಿಯಾಗಿ ಸ್ನೇಹಜೀವಿಯಾಗಿದ್ದರು. ಕಾನೂನು ಪದವೀಧರರಾಗಿದ್ದ ಅವರು ಕೃಷಿ, ವ್ಯವಹಾರ, ಹೋಟೆಲ್ ಉದ್ಯಮ, ಹೈನುಗಾರಿಕೆಯಲ್ಲಿ ಪರಿಣತರು.
ಬಳ್ಳಾಲ್ ಮನೆತನದ ದಾನ ಧರ್ಮಾದಿ ಸತ್ಕಾರ್ಯಗಳನ್ನು, ಪೂಜೆಗಳನ್ನು, ಧಾರ್ಮಿಕ ಪರಂಪರೆಯನ್ನು ಶ್ರದ್ಧಾ-ಭಕ್ತಿಯಿಂದ ನಡೆಸಿಕೊಂಡು ಬಂದ ಆದರ್ಶ ವ್ಯಕ್ತಿಯಾಗಿ ಅವರು ಚಿರಪರಿಚಿತರು.
ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್, ಶಾಸಕ ಹರೀಶ್ ಪೂಂಜ ಅಂತಿಮ ನಮನದೊಂದಿಗೆ ಶ್ರದ್ಧಾಂಜಲಿ ಅರ್ಪಿಸಿದರು. ಸಬರಬೈಲ್ನಲ್ಲಿ ಅವರ ಮನೆಯ ಬಳಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲಾಯಿತು.