ಮಂಗಳೂರು: ಭಾರೀ ಮಳೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಮರವೂರು ಬಳಿ ಸೇತುವೆ ಬಿರುಕು ಬಿಟ್ಟಿದೆ.
ಕಳೆದ ಮಳೆಗಾಲಕ್ಕೆ ಬಿರುಕು ಕಾಣಿಸಿಕೊಂಡಿದ್ದ ಮರವೂರು ಸೇತುವೆಯ ಬಳಿ ಕುಸಿತವಾಗಿದ್ದು ಆತಂಕಕ್ಕೆ ಕಾರಣವಾಗಿದೆ . ಸೇತುವೆ ಮತ್ತು ರಸ್ತೆ ಸಂಪರ್ಕ ಕಲ್ಪಿಸುವ ಜಾಗದಲ್ಲಿ ಬಿರುಕು ಕಾಣಿಸಿಕೊಂಡಿದೆ. ಬಜ್ಪೆ ವಿಮಾನಿಲ್ದಾಣದಿಂದ ಮಂಗಳೂರಿಗೆ ಬರುವ ರಸ್ತೆ ಬಲ ಬದಿಯಲ್ಲಿ ಮಣ್ಣು ಕುಸಿತವಾಗಿದೆ ಹೀಗಾಗಿ 1ಬದಿಯಲ್ಲಿ ಮಾತ್ರ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ ಬಿರುಕು ಬಿಟ್ಟ ಜಾಗದಲ್ಲಿ ಮಣ್ಣು ಹಾಕುವ ಕೆಲಸ ನಡೆಯುತ್ತಿದೆ