ಕಾಸರಗೋಡು : ಉಪ್ಪಳ ನಯಾಬಜಾರಿನ ಅಬ್ದುಲ್ಲಾ ಉಸ್ತಾದ್ ಎಂಬವರನ್ನು ಅಪಹರಿಸಿ ಹಣಕ್ಕಾಗಿ ಬೆದರಿಸಿ , ಹಲ್ಲೆ ನಡೆಸಿದ್ದ ಪ್ರಕರಣದ ಆರೋಪಿಯೋರ್ವನನ್ನು ಕಾಸರಗೋಡು ಡಿ ವೈ ಎಸ್ಪಿ ಬಾಲಕೃಷ್ಣನ್ ನಾಯರ್ ನೇತೃತ್ವದ ಪೊಲೀಸ್ ತಂಡ ಬಂಧಿಸಿದೆ.
ಬಂಧಿತನನ್ನು ಪಚ್ಚ೦ಬಳ ಟಿಪ್ಪುನಗರದ ಮುಸಾಹಿದ್ ಹುಸೈನ್ ( ೨೪) ಎಂದು ಗುರುತಿಸಲಾಗಿದೆ.
ಎರಡು ದಿನಗಳ ಹಿಂದೆ ಕಾರಿನಲ್ಲಿ ಬಂದ ತಂಡವು ಉಪ್ಪಳದ ಕ್ವಾಟರ್ಸ್ ಗೆ ನುಗ್ಗಿ ಅಬ್ದುಲ್ಲ ರನ್ನು ಬಲವಂತವಾಗಿ ಹೊರಗೆಳೆದು ಬಳಿಕ ಕಾರಿನಲ್ಲಿ ಅಪಹರಿಸಿದ್ದು , ಬಳಿಕ ಹಣಕ್ಕಾಗಿ ಬೇಡಿಕೆ ಇಟ್ಟು ಹಲ್ಲೆ ನಡೆಸಿದ್ದು , ಬಳಿಕ ಉಪ್ಪಳ ಕುನ್ನಿಲ್ ಎಂಬಲ್ಲಿ ನಿರ್ಜನ ಪ್ರದೇಶದಲ್ಲಿ ಬೆದರಿಸಿ ತಂಡವು ಹಲ್ಲೆ ನಡೆಸಿ ತ್ತು . ಈ ನಡುವೆ ನಡುವೆ ಪತ್ನಿ ನೀಡಿದ ಮಾಹಿತಿಯಂತೆ ಕುಂಬಳೆ ಮತ್ತು ಮಂಜೇಶ್ವರ ಠಾಣಾ ಪೊಲೀಸರು ಕಾರ್ಯಾಚರಣೆ ನಡೆಸಿದ್ದು , ಪೈವಳಿಕೆ ಬಳಿ ತಂಡವು ಅಬ್ದುಲ್ಲ ಉಸ್ತಾದ್ ರನ್ನು ಬಿಟ್ಟು ಪರಾರಿಯಾಗಿದೆ. ಬಳಿಕ ನಡೆಸಿದ ತನಿಖೆಯಿಂದ ಓರ್ವ ಆರೋಪಿಯನ್ನುಬಂಧಿಸಲಾಗಿದೆ . ನಾಲ್ವರು ತಲೆಮರೆಸಿಕೊಂಡಿದ್ದಾರೆ .
ಹಲ್ಲೆ ಪ್ರಕರಣ : ಆರೋಪಿಯೋರ್ವನ ಬಂಧನ
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.