News Karnataka Kannada
Tuesday, April 30 2024
ಕಾಸರಗೋಡು

ಹಲ್ಲೆ ಪ್ರಕರಣ : ಆರೋಪಿಯೋರ್ವನ ಬಂಧನ

Arrest 22082021
Photo Credit :

ಕಾಸರಗೋಡು  :  ಉಪ್ಪಳ ನಯಾಬಜಾರಿನ ಅಬ್ದುಲ್ಲಾ   ಉಸ್ತಾದ್ ಎಂಬವರನ್ನು ಅಪಹರಿಸಿ  ಹಣಕ್ಕಾಗಿ  ಬೆದರಿಸಿ , ಹಲ್ಲೆ ನಡೆಸಿದ್ದ  ಪ್ರಕರಣದ ಆರೋಪಿಯೋರ್ವನನ್ನು  ಕಾಸರಗೋಡು ಡಿ ವೈ ಎಸ್ಪಿ  ಬಾಲಕೃಷ್ಣನ್ ನಾಯರ್ ನೇತೃತ್ವದ ಪೊಲೀಸ್ ತಂಡ ಬಂಧಿಸಿದೆ.
ಬಂಧಿತನನ್ನು ಪಚ್ಚ೦ಬಳ   ಟಿಪ್ಪುನಗರದ ಮುಸಾಹಿದ್ ಹುಸೈನ್ ( ೨೪) ಎಂದು ಗುರುತಿಸಲಾಗಿದೆ.
ಎರಡು ದಿನಗಳ ಹಿಂದೆ ಕಾರಿನಲ್ಲಿ ಬಂದ  ತಂಡವು ಉಪ್ಪಳದ ಕ್ವಾಟರ್ಸ್ ಗೆ ನುಗ್ಗಿ ಅಬ್ದುಲ್ಲ ರನ್ನು ಬಲವಂತವಾಗಿ ಹೊರಗೆಳೆದು  ಬಳಿಕ ಕಾರಿನಲ್ಲಿ ಅಪಹರಿಸಿದ್ದು , ಬಳಿಕ ಹಣಕ್ಕಾಗಿ ಬೇಡಿಕೆ ಇಟ್ಟು  ಹಲ್ಲೆ ನಡೆಸಿದ್ದು ,  ಬಳಿಕ  ಉಪ್ಪಳ ಕುನ್ನಿಲ್ ಎಂಬಲ್ಲಿ ನಿರ್ಜನ ಪ್ರದೇಶದಲ್ಲಿ  ಬೆದರಿಸಿ ತಂಡವು ಹಲ್ಲೆ    ನಡೆಸಿ ತ್ತು . ಈ   ನಡುವೆ ನಡುವೆ ಪತ್ನಿ ನೀಡಿದ ಮಾಹಿತಿಯಂತೆ ಕುಂಬಳೆ ಮತ್ತು ಮಂಜೇಶ್ವರ ಠಾಣಾ ಪೊಲೀಸರು ಕಾರ್ಯಾಚರಣೆ ನಡೆಸಿದ್ದು , ಪೈವಳಿಕೆ ಬಳಿ ತಂಡವು  ಅಬ್ದುಲ್ಲ  ಉಸ್ತಾದ್ ರನ್ನು ಬಿಟ್ಟು ಪರಾರಿಯಾಗಿದೆ. ಬಳಿಕ ನಡೆಸಿದ ತನಿಖೆಯಿಂದ ಓರ್ವ ಆರೋಪಿಯನ್ನುಬಂಧಿಸಲಾಗಿದೆ . ನಾಲ್ವರು ತಲೆಮರೆಸಿಕೊಂಡಿದ್ದಾರೆ .

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು