ಕನ್ನಡ ಸಾಹಿತ್ಯ ಪರಿಷತ್ ನ ಕೇರಳ ಗಡಿನಾಡ ಘಟಕ ಕಾಸರಗೋಡು ಇದರ ನೂತನ ಅಧ್ಯಕ್ಷರಾಗಿ ಎಸ್.ವಿ.ಭಟ್ ಕಾಸರಗೋಡು ಅವರು ನಾಲ್ಕನೇ ಬಾರಿ ಪುನರಾಯ್ಕೆ ಗೊಂಡಿದ್ದಾರೆ. ಎಸ್.ವಿ.ಭಟ್ ಅವರು 294 ಮತಗಳನ್ನು ಪಡೆದು 116 ಮತಗಳಿಂದ ವಿಜೇತರಾದರು.
ಕವಿ, ಸಾಹಿತಿ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಅವರು 178 ಮತಗಳನ್ನು ಪಡೆದರು. ಬೆಂಗಳೂರಿನಲ್ಲಿ ಬುಧವಾರ ಬೆಳಗ್ಗೆ ಮತ ಎಣಿಕೆ ಆರಂಭಗೊಂಡು ಮಧ್ಯಾಹ್ನ ಮುಕ್ತಾಯಗೊಂಡಿತು. ಬಳಿಕ ಫಲಿತಾಂಶ ಘೋಷಿಸಲಾಯಿತು.
ಎಸ್.ವಿ.ಭಟ್ ಅವರು ಕಸಾಪ ಗಡಿನಾಡ ಘಟಕಕ್ಕೆ ನಾಲ್ಕನೇ ಅವಧಿಗೆ ಆಯ್ಕೆಯಾಗಿದ್ದು , ಸಾಹಿತಿಯಾಗಿರುವ ಅವರು ಅಧ್ಯಾಪಕರಾಗಿ, ಉಪಜಿಲ್ಲಾ ಶಿಕ್ಷಣಾಧಿಕಾರಿಯಾಗಿ ನಿವೃತ್ತರಾಗಿದ್ದರು.