ಕಾಸರಗೋಡು: ಕಾಸರಗೋಡಿನ ಹಿರಿಯ ವಕೀಲ, ಬಿಜೆಪಿಯ ಅಗ್ರಗಣ್ಯ ನೇತಾರ ಹಾಗೂ ಕಾಸರಗೋಡು ನಗರಸಭೆಯ ಮಾಜಿ ಸದಸ್ಯ ಅಲ್ಲದೆ ಮಾಜಿ ಉಪಾಧ್ಯಕ್ಷರೂ ಆಗಿದ್ದ ಕೆ.ಸುಂದರ ರಾವ್ (88) ಶುಕ್ರವಾರ ಮುಂಜಾನೆ ಸ್ವಗೃಹದಲ್ಲಿ ನಿಧನ ಹೊಂದಿದರು.
ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಎರಡು ವರ್ಷಗಳ ಕಾಲ ಜೈಲುವಾಸ ಅನುಭವಿಸಿದ್ದ ಅವರು, ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಸೇರಿದಂತೆ ವಿವಿಧ ವಲಯಗಳಲ್ಲಿ ಸಕ್ರಿಯರಾಗಿದ್ದರು. ಸುಂದರ ರಾವ್ ಅವರು ಗಡಿನಾಡು ಕಾಸರಗೋಡು ಜಿಲ್ಲೆಯ ಕನ್ನಡ ಭಾಷಾ ಅಲ್ಪಸಂಖ್ಯಾತರ ಹಕ್ಕು ಮತ್ತು ಸವಲತ್ತುಗಳಿಗಾಗಿ ಧ್ವನಿಯೆತ್ತುತ್ತಲೇ ಬಂದವರು. ಅತ್ಯುತ್ತಮ ಸಂಘಟಕರಾಗಿ, ಕನ್ನಡ ಪರ ಹೋರಾಟಗಾರರಾಗಿ ಗುರುತಿಸಿಕೊಂಡವರು. ಮೃತರು ಪತ್ನಿ ಪ್ರೇಮಕುಮಾರಿ, ಮಕ್ಕಳಾದ ಪ್ರಶಾಂತ್, ಕಿರಣ್ ಚಂದ್ರ, ಕಿಶೋರ್ ಕುಮಾರ್, ಶಾಲಿನಿ ಅವರನ್ನು ಅಗಲಿದ್ದಾರೆ.