News Karnataka Kannada
Thursday, May 02 2024
ಕಾಸರಗೋಡು

ಕಾಸರಗೋಡು ನಗರಸಭೆಯ ಮಾಜಿ ಉಪಾಧ್ಯಕ್ಷ , ವಕೀಲ ಕೆ.ಸುಂದರ ರಾವ್ ವಿಧಿವಶ

New Project (11)
Photo Credit :

ಕಾಸರಗೋಡು: ಕಾಸರಗೋಡಿನ ಹಿರಿಯ ವಕೀಲ, ಬಿಜೆಪಿಯ ಅಗ್ರಗಣ್ಯ ನೇತಾರ ಹಾಗೂ ಕಾಸರಗೋಡು ನಗರಸಭೆಯ ಮಾಜಿ ಸದಸ್ಯ ಅಲ್ಲದೆ ಮಾಜಿ ಉಪಾಧ್ಯಕ್ಷರೂ ಆಗಿದ್ದ ಕೆ.ಸುಂದರ ರಾವ್ (88) ಶುಕ್ರವಾರ ಮುಂಜಾನೆ ಸ್ವಗೃಹದಲ್ಲಿ ನಿಧನ ಹೊಂದಿದರು.

ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಎರಡು ವರ್ಷಗಳ ಕಾಲ ಜೈಲುವಾಸ ಅನುಭವಿಸಿದ್ದ ಅವರು, ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಸೇರಿದಂತೆ ವಿವಿಧ ವಲಯಗಳಲ್ಲಿ ಸಕ್ರಿಯರಾಗಿದ್ದರು. ಸುಂದರ ರಾವ್ ಅವರು ಗಡಿನಾಡು ಕಾಸರಗೋಡು ಜಿಲ್ಲೆಯ ಕನ್ನಡ ಭಾಷಾ ಅಲ್ಪಸಂಖ್ಯಾತರ ಹಕ್ಕು ಮತ್ತು ಸವಲತ್ತುಗಳಿಗಾಗಿ ಧ್ವನಿಯೆತ್ತುತ್ತಲೇ ಬಂದವರು. ಅತ್ಯುತ್ತಮ ಸಂಘಟಕರಾಗಿ, ಕನ್ನಡ ಪರ ಹೋರಾಟಗಾರರಾಗಿ ಗುರುತಿಸಿಕೊಂಡವರು. ಮೃತರು ಪತ್ನಿ ಪ್ರೇಮಕುಮಾರಿ, ಮಕ್ಕಳಾದ ಪ್ರಶಾಂತ್, ಕಿರಣ್ ಚಂದ್ರ, ಕಿಶೋರ್ ಕುಮಾರ್, ಶಾಲಿನಿ ಅವರನ್ನು ಅಗಲಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು