ಕಾಸರಗೋಡು : ಕೇರಳ ಸರಕಾರದ ನೂರು ದಿನ ಕಾರ್ಯಕ್ರಮದಂಗವಾಗಿ ಎಲ್ಲರಿಗೂ ಭೂಮಿ ಎಂಬ ಗುರಿಯೊಂದಿಗೆ ಜಿಲ್ಲೆಯಲ್ಲಿ ಸೆ. 14 ರಂದು ಹಕ್ಕುಪತ್ರ ಮೇಳ ಆಯೋಜಿಸಲಾಗಿದೆ.
ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಹಕ್ಕುಪತ್ರ ಮೇಳ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜಿಲ್ಲಾ ಮಟ್ಟದ ಉದ್ಘಾಟನೆ ಅಂದು ಬೆಳಿಗ್ಗೆ 11.30 ಕ್ಕೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣ ದಲ್ಲಿ ನಡೆಯಲಿರುವ ಸಮಾರಂಭ ದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಅಹಮ್ಮದ್ ದೇವರ್ ಕೋವಿಲ್ ಉದ್ಘಾಟಿಸುವರು. ಶಾಸಕ ಎನ್.ಎ .ನೆಲ್ಲಿಕುನ್ನು ಉದ್ಘಾಟಿಸುವರು. ಸಂಸದ ರಾಜ್ ಮೋಹನ್ ಉಣ್ಣಿತ್ತಾನ್, ಶಾಸಕರಾದ ಸಿ. ಎಚ್ ಕುಙಾಂಬು ಮೊದಲಾದವರು ಉಪಸ್ಥಿತ ರಿರುವರು
ಮಂಜೇಶ್ವರ ತಾಲೂಕು ಮಟ್ಟದ ಅದಾಲತ್ ಶಾಸಕ ಎ. ಕೆ. ಎಂ ಅಶ್ರಫ್, ಹೊಸದುರ್ಗದ ಲ್ಲಿ ಶಾಸಕ ಇ. ಚಂದ್ರಶೇಖರ ನ್, ವೆಳ್ಳ ರಿಕುಂಡು ವಿ ನಲ್ಲಿ ಶಾಸಕ ಎಂ ರಾಜಗೋಪಾಲ್ ಹಕ್ಕು ಪತ್ರ ಮೇಳವನ್ನು ಉದ್ಘಾಟಿಸುವರು.
ಕೋವಿಡ್ ಮಾನದಂಡ ಪಾಲಿಸಿ ಕಾರ್ಯಕ್ರಮ ನಡೆಯಲಿದ್ದು, ಆಯ್ದ ಕೆಲವರಿಗೆ ಹಾಗೂ ಉಳಿದ ವರಿಗೆ ಎರಡು ದಿನ ಗಳೊ ಳಗೆ ಸಂಬಂಧ ಪಟ್ಟ ಗ್ರಾಮ ಕಚೇರಿ ಮೂಲಕ ಹಕ್ಕು ಪತ್ರ ವಿತ ರಿ ಸಲಾಗುವುದು ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಉಪ ಜಿಲ್ಲಾಧಿಕಾರಿ ಕೆ. ರವಿ ಕುಮಾರ್ ಉಪಸ್ಥಿತರಿದ್ದರು