ಕಾಸರಗೋಡು : ಉಪ್ಪಳದ ಚಿನ್ನದ ಅಂಗಡಿಯೊಂದರಿಂದ ಕಳವು ನಡೆಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರು ಆರೋಪಿಗಳನ್ನು ಡಿವೈಎಸ್ಪಿ ಬಾಲಕೃಷ್ಣ ನ್ ನಾಯರ್ ನೇತೃತ್ವದ ಪೊಲೀಸ್ ತಂಡ ಬಂಧಿಸಿದೆ.
ಉಪ್ಪಳ ದ. ಎಸ್. ಎಸ್. ಗೋಲ್ಡ್ ನಲ್ಲಿ ನಡೆದ ಕಳವು ಪ್ರಕರಣ ಕ್ಕೆ ಸಂಬಂಧ ಪಟ್ಟಂತೆ ತಿಂಗಳು ಗಳ ಬಳಿಕ ಆರೋಪಿಗಳನ್ನು ಬಂಧಿಸಲಾಗಿದೆ.
ಬಂಧಿತರನ್ನು ತಮಿಳುನಾಡು ನಾಮಕ್ಕಲ್ ನ ವೇಲಾ ಯುಧನ್ (46), ಕೊಯ ಮುತ್ತೂರಿನ ಸೈದಾಲಿ (49) ಮತ್ತು ರಾಜನ್ (51) ಬಂಧಿತ ಆರೋಪಿಗಳು.
2020 ರ ನವಂಬರ್ ಆರರಂದು ಕೃತ್ಯ ನಡೆದಿತ್ತು .ಬೀಗ ಮುರಿದು ಒಳನುಗ್ಗಿದ ಕಳ್ಳರು 65 ಗ್ರಾಂ ಚಿನ್ನಾಭರಣ ಹಾಗೂ ಎರಡು ಕಿಲೋ ಬೆಳ್ಳಿಯ ಆಭರಣ ಗಳನ್ನು ಕಳವು ಮಾಡಲಾಗಿತ್ತು.ಇವರು ಅಂತಾರಾಜ್ಯ ದರೋಡೆಕೋರರ ತಂಡ ದವರು ಎಂದು ಪೊಲೀಸರು ತಿಳಿಸಿದ್ದಾರೆ. ಕೇರಳ, ಕರ್ನಾಟಕ , ತಮಿಳುನಾಡು ಹಾಗೂ ಇನ್ನಿತರೆ ಡೆ ಗಳಲ್ಲಿ ಕಳವು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ