ಕಾಸರಗೋಡು : ಯುವ ಕಾಂಗ್ರೆಸ್ ಕಾರ್ಯಕರ್ತರಾಗಿದ್ದ ಕೃಪೇಶ್ ಮತ್ತು ಶರತ್ ಲಾಲ್ ಕೊಲೆ ಪ್ರಕರಣ ಸಂಬಂಧಪಟ್ಟಂತೆ ಕ್ರೈಂ ಬ್ರಾಂಚ್ ಪೊಲೀಸರು ವಶಕ್ಕೆ ಪಡೆದಿದ್ದ ಬೈಕ್ ನಾಪತ್ತೆಯಾದ ಘಟನೆ ಪ್ರತಿಭಟಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ಇಂದು ಬೇಕಲ ಪೊಲೀಸ್ ಠಾಣೆಗೆ ಜಾಥಾ ನಡೆಸಿದರು. ಮೆರವಣಿಗೆ ಮೂಲಕ ಆಗಮಿಸಿದ ಕಾರ್ಯಕರ್ತರು ಪೊಲೀಸ್ ಠಾಣಾ ಮುಂಭಾಗದಲ್ಲಿ ಹಾಕಲಾಗಿದ್ದ ಬ್ಯಾರಿಕೇಡ್ ಗಳನ್ನು ಮುನ್ನುಗ್ಗಲು ಯತ್ನಿಸಿದ್ದು , ಈ ಸಂದರ್ಭದಲ್ಲಿ ಪೊಲೀಸರು ಹಾಗೂ ಕಾರ್ಯಕರ್ತರ ನಡುವೆ ನೂಕು ತಳ್ಳಾಟ ನಡೆಯಿತು.
ಪ್ರತಿಭಟನೆಯನ್ನು ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹಕೀಮ್ ಕುನ್ನಿಲ್ ಉದ್ಘಾಟಿಸಿದರು.
ಪ್ರತಿಭಟನೆಯನ್ನು ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹಕೀಮ್ ಕುನ್ನಿಲ್ ಉದ್ಘಾಟಿಸಿದರು.
ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪ್ರದೀಪ್ ಕುಂಡೆ ಅಧ್ಯಕ್ಷತೆ ವಹಿಸಿದ್ದರು.
ಜೋಮೋನ್ ಜೋಸ್, ಶ್ರೀಜಿತ್ ಮಾಡಕಲ್ , ಕಾರ್ತಿಕೇಯನ್ , ನೋಯಲ್ ಟೋಮ್ , ರಾಜೇಶ್ ಪಳ್ಳಿಕೆರೆ , ಇಸ್ಮಾಯಿಲ್ ಚಿತ್ತಾರಿ ಮೊದಲಾದವರು ನೇತೃತ್ವ ನೀಡಿದರು
ಜೋಮೋನ್ ಜೋಸ್, ಶ್ರೀಜಿತ್ ಮಾಡಕಲ್ , ಕಾರ್ತಿಕೇಯನ್ , ನೋಯಲ್ ಟೋಮ್ , ರಾಜೇಶ್ ಪಳ್ಳಿಕೆರೆ , ಇಸ್ಮಾಯಿಲ್ ಚಿತ್ತಾರಿ ಮೊದಲಾದವರು ನೇತೃತ್ವ ನೀಡಿದರು