News Karnataka Kannada
Sunday, April 28 2024
ಕರಾವಳಿ

ಶಾಲೆಯಲ್ಲಿ ಅಧ್ಯಾಪಕರ ಮೇಲೆ ವಿದ್ಯಾರ್ಥಿಗಳಿಂದ ಹಲ್ಲೆ

Photo Credit :

ಶಾಲೆಯಲ್ಲಿ ಅಧ್ಯಾಪಕರ ಮೇಲೆ  ವಿದ್ಯಾರ್ಥಿಗಳಿಂದ ಹಲ್ಲೆ

ಕಾಸರಗೋಡು: ಮೇಲ್ಪರಂಬ  ಚಂದ್ರಗಿರಿ ಶಾಲೆಯಲ್ಲಿ  ಅಧ್ಯಾಪಕರು ಮತ್ತು ವಿದ್ಯಾರ್ಥಿಗಳ ನಡುವೆ ಜಟಾಪಟಿ ನಡೆದಿದ್ದು,  ಇಬ್ಬರು ಅಧ್ಯಾಪಕರ ಮೇಲೆ  ವಿದ್ಯಾರ್ಥಿಗಳು  ಹಲ್ಲೆ ನಡೆಸಿದ ಘಟನೆ ನಡೆದಿದೆ.

ಗಾಯಗೊಂಡಿರುವ ಮುಖ್ಯೋಪಾಧ್ಯಾಯ ವಿ . ಇಬ್ರಾಹಿಂ ( 45)ಮತ್ತು ಅಧ್ಯಾಪಕ ಪಿ . ಟಿ ಸನ್ನಿ ( 50) ರವರು ಕಾಸರಗೋಡು ಜನರಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಎರಡು ದಿನಗಳಿಂದ ಶಾಲೆಯಲ್ಲಿ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳ ನಡುವೆ  ಮಾತಿನ ಚಕಮಕಿ ನಡೆಯುತ್ತಿದ್ದು , ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿದ್ದರು.
ಅಕ್ಟೊಬರ್ 21 ರಂದು ರಾಜ್ಯ ಮೀನುಗಾರಿಕಾ ಸಚಿವೆ ಮೆರ್ಸಿಕುಟ್ಟಿ ಈ ಶಾಲಾ ಕಟ್ಟಡವನ್ನು  ಉದ್ಘಾಟಿಸಿದ್ದರು. ಪ್ರಕೃತಿ ವಿಕೋಪ ಬರಪರಿಹಾರ ಯೋಜನೆ ಪ್ರಕಾರ ಎರಡು ಕೋಟಿ ರೂ. ಖರ್ಚಿನಲ್ಲಿ ಎರಡು ಕಟ್ಟಡಗಳನ್ನು   ನಿರ್ಮಿಸಲಾಗಿತ್ತು.

ಪ್ರಕೃತಿ ವಿಕೋಪ ವುಂಟಾಗುವ ವೇಳೆ ಸಂತ್ರಸ್ಥರಿಗೆ ಪುನರ್ವಸತಿ  ಕಲ್ಪಿಸಲು  ಹಾಗೂ ಉಳಿದ ಸಂದರ್ಭಗಳಲ್ಲಿ  ತರಗತಿ ನಡೆಸುವ ಉದ್ದೇಶದೊಂದಿಗೆ ಕಟ್ಟಡವನ್ನು ನಿರ್ಮಿಸಲಾಗಿತ್ತು. ಕೆಳ ಅಂತಸ್ತಿನಲ್ಲಿ 10ನೇ ತರಗತಿ ಹಾಗೂ ಕಂಪ್ಯೂಟರ್ ಕೊಠಡಿ ಕಾರ್ಯಾಚರಿಸಲು ಹಾಗೂ ಮೇಲಂತಸ್ತನ್ನು  12ನೇ ತರಗತಿಗೆ ನೀಡಲು ಒಪ್ಪಂದವುಂಟಾಗಿತ್ತು. ಆದರೆ 12ನೇ ತರಗತಿಗೆ  ಕೆಳ ಅಂತಸ್ತನ್ನು ನೀಡಬೇಕೆಂದು ಒಂದು  ಬಣ  ಪಟ್ಟು ಹಿಡಿದಿದೆ.

ಇದರಿಂದ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳ ನಡುವೆ ಎರಡು ಬಣ ಉಂಟಾಗಿದ್ದು , ಕಳೆದ ಎರಡುದಿನಗಳಿಂದ ಪ್ರತಿಭಟನೆ ಮತ್ತು ತರಗತಿ ಬಹಿಷ್ಕಾರ ನಡೆಯುತ್ತಿತ್ತು. ಗುರುವಾರ ಶಾಲಾ ಅಧಿಕಾರಿಗಳು ಸಭೆ ಕರೆದರೂ ಒಮ್ಮತಕ್ಕೆ ಬರಲು  ಸಾಧ್ಯವಾಗಿರಲಿಲ್ಲ.  ಈ ನಡುವೆ  ಮಂಗಳವಾರ ಬೆಳಿಗ್ಗೆ  ಈ ಕುರಿತು ವಿವಾದ ಮತ್ತೆ ಉಂಟಾಗಿ ಕೆಲ ವಿದ್ಯಾರ್ಥಿಗಳು ಅಧ್ಯಾಪಕರ ಮೇಲೆ ಹಲ್ಲೆ ನಡೆಸಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಶಾಲೆ ಮುಂದೆ ಪೊಲೀಸರು ಕಾವಲು ಏರ್ಪಡಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು