News Karnataka Kannada
Thursday, May 09 2024
ಕರಾವಳಿ

ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ, ಶಿಲಾನ್ಯಾಸ

Photo Credit :

 ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ, ಶಿಲಾನ್ಯಾಸ

ಸುಳ್ಯ: ಗಡಿ ಪ್ರದೇಶವಾದ ಪನತ್ತಡಿ ಗ್ರಾಮ ಪಂಚಾಯತಿಯ ಕಲ್ಲಪಳ್ಳಿಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ ಹಾಗು ಶಿಲಾನ್ಯಾಸವನ್ನು ಕೇರಳ ಸರ್ಕಾರದ ಕಂದಾಯ ಸಚಿವ ಇ.ಚಂದ್ರಶೇಖರನ್ ನೆರವೇರಿಸಿದರು.

ಕಲ್ಲಪಳ್ಳಿಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಸಮಾರಂಭದಲ್ಲಿ ಪಾಣತ್ತೂರು-ಕಲ್ಲಪಳ್ಳಿ ರಸ್ತೆಯಲ್ಲಿ 3 ಕೋಟಿ ರೂನಲ್ಲಿ  ಪೂರ್ತಿಗೊಂಡ ರಸ್ತೆ ಕಾಮಗಾರಿ, ಉಡಿಯಾರ ಎಂಬಲ್ಲಿ 68 ಲಕ್ಷ ರೂ.ಅನುದಾನಲ್ಲಿ ಪೂರ್ತಿಗೊಂಡ ವೆಂಟಿಲೇಟರ್ ಕಂ ಬ್ರಿಡ್ಜ್‍ನ ಉದ್ಘಾಟನೆ ನೆರವೇರಿಸಿದರು.

ಕಲ್ಲಪಳ್ಳಿ-ಕಮ್ಮಾಡಿ ರಸ್ತೆಯಲ್ಲಿ 98.75 ಲಕ್ಷದಲ್ಲಿ  ಸೇತುವೆ ನಿರ್ಮಾಣಕ್ಕೆ ಮತ್ತು ಪಾಣತ್ತೂರು-ಕಲ್ಲಪಳ್ಳಿ ರಸ್ತೆಯಲ್ಲಿ 3.74 ಕೋಟಿಯ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆಯನ್ನು ಸಚಿವರು ನೆರವೇರಿಸಿದರು.

ಪನತ್ತಡಿ ಗ್ರಾಮ ಪಂಚಾಯತಿ ಅಧ್ಯಕ್ಷ  ಪಿ.ಜಿ.ಮೋಹನ್ ಅಧ್ಯಕ್ಷತೆ ವಹಿಸಿದ್ದರು. ಪರಪ್ಪ ಬ್ಲಾಕ್ ಪಂಚಾಯಿತಿ ಅಧ್ಯಕ್ಷ  ಪಿ.ರಾಜನ್, ಕಾಸರಗೋಡು ಜಿ.ಪಂ. ಸದಸ್ಯರಾದ ಪದ್ಮಾವತಿ, ಎಂ.ನಾರಾಯಣ, ಬ್ಲಾಕ್ ಪಂಚಾಯತ್ ಸದಸ್ಯೆ ಲತಾ ಅರವಿಂದನ್, ಪನತ್ತಡಿ ಗ್ರಾಮಪಂಚಾಯಿತಿ ಸದಸ್ಯರಾದ ಯಂ.ಸಿ ಮಾದವ, ರಜನೀ ದೇವಿ, ಪಿ.ತಂಬಾನ್, ಕುಟುಂಬಶ್ರೀ ಸಿಡಿಯಸ್ ಅಧ್ಯಕ್ಷೆ ಮಾಧವಿ ರಾಜನ್, ಪ್ರಮುಖರಾದ ಬಿ ಮೋಹನ್ ಕುಮಾರ್, ಕೆ.ಜೆ.ಜೇಮ್ಸ್, ಅರುಣ್ ರಂಗತ್ತಮಲೆ ಉಪಸ್ಥಿತರಿದ್ದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಹೇಮಾಂಬಿಕ ಸ್ವಾಗತಿಸಿ, ಸದಸ್ಯೆ ನಳಿನಾಕ್ಷಿ ದಾಮೋದರ ವಂದಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
180

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು