ಪುತ್ತೂರು: ರೈಲಿನ ಅಡಿಗೆ ಬಿದ್ದು ರಿಕ್ಷಾ ಚಾಲಕರೋರ್ವರು ಮೃತಪಟ್ಟ ಘಟನೆ ಹಾರಾಡಿ ಕರ್ಮಲ ಸಮೀಪ ಫೆ.13ರಂದು ನಡೆದಿದೆ.
ಮೂಲತಃ ಕಡಬ ತಾಲೂಕಿನ ಏನೆಕಲ್ಲು ಕಲ್ಲಾಜೆ ದಿ. ವಾಮನ ಗೌಡರ ಪುತ್ರ ಹಾರಾಡಿ ನಂದಿಲದಲ್ಲಿ ಬಾಡಿಗೆ ಮನೆಯಲ್ಲಿ ವಾಸ್ತವ್ಯ ಹೊಂದಿದ್ದ ರಿಕ್ಷಾ ಚಾಲಕ ನಾರಾಯಣ ಯಾನೆ ನಿತ್ಯ(45) ಎಂಬವರು ರೈಲಿನಡಿಗೆ ಬಿದ್ದು ಮೃತಪಟ್ಟವರು. ಅವಿವಾಹಿತರಾಗಿದ್ದ ನಿತ್ಯ ಅವರು ಸುಮಾರು 7 ವರ್ಷದಿಂದ ಹಾರಾಡಿ ನಂದಿಲದಲ್ಲಿರುವ ಬಾಡಿಗೆ ಮನೆಯೊಂದರಲ್ಲಿ ವಾಸ್ತವ್ಯ ಹೊಂದಿದ್ದ ಅವರು ಫೆ. 3ರಂದು ಬೆಳಗ್ಗೆ ರಿಕ್ಷಾದಲ್ಲಿ ಹೋದವರು ಮತ್ತೆ ಮನೆಗೆ ಹಿಂದಿರುಗಿಲಿಲ್ಲ. ಫೆ. 13ರಂದು ಬಾಡಿಗೆ ಮನೆಯಿಂದ ತುಸು ದೂರದಲ್ಲಿರುವ ಕರ್ಮಲ ಎಂಬಲ್ಲಿ ಪಾಸೆಂಜರ್ ರೈಲಿನಡಿಗೆ ಅವರು ಬಿದ್ದು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.
ಆರಂಭದಲ್ಲಿ ಗುರುತು ಪರಿಚಯ ಸಿಗದ ಹಿನ್ನೆಲೆಯಲ್ಲಿ ರೈಲ್ವೇ ಪೊಲೀಸರು ಮಧ್ಯಾಹ್ನದ ವೇಳೆ ಬಂದು ಮೃತ ದೇಹವನ್ನು ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಕೊಂಡೊಯ್ದಿದ್ದರು. ಬಳಿಕ ಮೃತ ದೇಹದ ಗುರುತು ಪತ್ತೆಯಾಗಿತ್ತು. ಮೃತರು ಸಹೋದರರು ಮತ್ತು ಸಹೋದರಿಯರನ್ನು ಅಗಲಿದ್ದಾರೆ. ಘಟೆನೆಗೆ ಸಂಬಂಧಿಸಿ ಮಂಗಳೂರು ರೈಲ್ವೇ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಉಪ್ಪಿನಂಗಡಿಯಲ್ಲಿ ಪತ್ತೆಯಾದ ಆಟೋ ರಿಕ್ಷಾ
ನಿತ್ಯ ಅವರು ಫೆ.3ರಂದು ರಿಕ್ಷಾದಲ್ಲಿ ಹೋದವರು ನಾಪತ್ತೆಯಾಗಿದ್ದರು. ಆದರೆ ಅವರ ಆಟೋ ರಿಕ್ಷಾ ಉಪ್ಪಿನಂಗಡಿಯ ಬಾರ್ ಆ್ಯಂಡ್ ರೆಸ್ಟೋರೆಂಟ್ನ ಬಳಿ ಪತ್ತೆಯಾಗಿತ್ತು. ಈ ಕುರಿತು ಮಾಹಿತಿ ಪಡೆದು ಕೊಂಡ ಅವರ ಸಂಬಂಧಿಕರು ಆಟೋ ರಿಕ್ಷಾವನ್ನು ಪುತ್ತೂರಿಗೆ ತಂದಿದ್ದರು.
ನೆಹರೂನಗರ ಪಾರ್ಕ್ನಲ್ಲಿ ಬಾಡಿಗೆ
ನಿತ್ಯ ಅವಿವಾಹಿತರಾಗಿದ್ದರಿಂದ ಬಾಡಿಗೆ ಮನೆಯಲ್ಲಿ ಅಡುಗೆ ಮಾಡದೆ ಹೊಟೇಲ್ನಲ್ಲೇ ಊಟೋಪಚಾರ ಮಾಡುತ್ತಿದ್ದರು. ಬೆಳಗ್ಗೆ ಹೋದರೆ ರಾತ್ರಿಯೇ ಮನೆಗೆ ಬರುತ್ತಿದ್ದು, ನೆಹರೂ ನಗರ ಪಾರ್ಕ್ನಲ್ಲಿ ಬಾಡಿಗೆ ಮಾಡುತ್ತಿದ್ದರು. ನಮ್ಮೊಂದಿಗೆ ತುಂಬಾ ಅನ್ಯೋತೆಯಿಂದ ಇದ್ದರು ಎಂದು ಬಾಡಿಗೆ ಮನೆಯ ಮಾಲಕರು ಮಾಹಿತಿ ನೀಡಿದ್ದಾರೆ. a