ಮೂಡುಬಿದಿರೆ: ಬೆಂಗಳೂರಿನ ಯೂತ್ ಫೋಟೋಗ್ರಾಫಿಕ್ ಸೊಸೈಟಿ ನಡೆಸಿದ ರಾಷ್ಟ್ರ ಮಟ್ಟದ ಛಾಯಾಚಿತ್ರಗ್ರಹಣ ಸ್ಪರ್ಧೆಯಲ್ಲಿ ಮೂಡುಬಿದಿರೆ ರೋಟರಿ ಆಂಗ್ಲ ಮಾಧ್ಯಮ ಶಾಲೆಯ 8ನೇ ತರಗತಿ ವಿದ್ಯಾರ್ಥಿ ಪರಮ್ ಜೈನ್ ಎರಡು ಸುವರ್ಣ ಪದಕಗಳ ಸಹಿತ ಪ್ರಥಮ ಬಹುಮಾನ ಗಳಿಸಿದ್ದಾರೆ.
ಅವರು ಆಳ್ವಾಸ್ ಆಯೋಜಿಸಿದ ಮೆರವಣಿಗೆಯೊಂದರ ಸಂದರ್ಭ ಕ್ಲಿಕ್ಕಿಸಿದ `ಲಾಂಗ್ಲೆಗ್ ಮಾರ್ಚ್’ ವರ್ಣ ವಿಭಾಗದಲ್ಲೂ ಕೇರಳದ ತೆಯ್ಯಂ ಮುಖ ವರ್ಣಿಕೆಯ ಚಿತ್ರ ಕಪ್ಪು ಬಿಳುಪು ವಿಭಾಗದಲ್ಲೂ ಬಹುಮಾನಿತವಾಗಿವೆ. ಪರಂ ಜೈನ್ ಜಿನೇಶ್ ಪ್ರಸಾದ್- ರಮ್ಯ ಬಲ್ಲಾಳ್ ಅವರ ಪುತ್ರ.