ಬೆಳ್ತಂಗಡಿ: ತುಳು ನಾಡಿನ ವೀರ ಪುರುಷರಾದ ಕೋಟಿ-ಚೆನ್ನಯರ ಮಾತೆ ದೇಯಿ ಬೈದೆತಿ ಪ್ರತಿಮೆಗೆ ಅಪಮಾನ ಮಾಡಿ ವಿಕೃರ ವರ್ತನೆತೋರಿದ ಮತಾಂಧ ಶಕ್ತಿಗಳ ಕೃತ್ಯಕ್ಕೆ ಬೆಳ್ತಂಗಡಿ ಬಿಜೆಪಿ ತೀವ್ರವಾಗಿ ಖಂಡಿಸಿದೆ.
ಇತ್ತೀಚಿನ ದಿನಗಳಲ್ಲಿ ಸಮಾಜದ ಸ್ವಾಸ್ಥ್ಯವನ್ನು ಹಾಳುಗೆಡುವ ಉದ್ದೇಶದಿಂದ ಕೆಲ ಕಿಡಿಗೇಡಿಗಳು ಹಾಗೂ ಮತಾಂಧ ಶಕ್ತಿಗಳು ಇಂತಹ ಕುಕೃತ್ಯವನ್ನು ಅಗಾಗ್ಗೆ ಮಾಡುತ್ತಿದ್ದು ಹಿಂದುಗಳ ಭಾವನೆಗಳನ್ನು ಕೆರಳಿಸುತ್ತಿದ್ದು, ಇಂತಹ ಕುಕೃತ್ಯ ನಡೆಸುವ ಮತಾಂದ ಶಕ್ತಿಗಳ ವಿರುದ್ಧ ಸೂಕ್ತ ರೀತಿಯ ಕಾನೂನು ಕ್ರಮ ಕೈಗೊಳ್ಳುವಂತೆ ಬೆಳ್ತಂಗಡಿ ಬಿಜೆಪಿ ಅಧ್ಯಕ್ಷರಾದ ರಂಜನ್.ಜಿ.ಗೌಡ, ಮಾಜಿ ಶಾಸಕ.ಕೆ.ಪ್ರಭಾಕರ ಬಂಗೇರ, ಜಿಲ್ಲಾ ಉಪಾಧ್ಯಕ್ಷರಾದ ಶಾರದ ರೈ, ಜಿಲ್ಲಾ ಕಾರ್ಯದರ್ಶಿ ಕೊರಗಪ್ಪ ನಾಯ್ಕ, ಪ್ರಧಾನ ಕಾರ್ಯದರ್ಶಿ ಪ್ರಭಾಕರ ಶೆಟ್ಟಿಉಪ್ಪಡ್ಕ, ಸೀತಾರಾಮ್ ಬಿ.ಎಸ್, ಪತ್ರಿಕಾ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.