ಸುಳ್ಯ: ನಗರ ಪಂಚಾಯಿತಿ ಆವರಣ ಸೇರಿದಂತೆ ನಗರದ ಕೆಲವು ಕಡೆ ಕಸ ತುಂಬಿ ದುರ್ನಾತ ಬೀರುತ್ತಿದ್ದು, ಈ ತ್ಯಾಜ್ಯಗಳನ್ನು ಆಧುನಿಕ ಯಂತ್ರಗಳನ್ನು ಬಳಸಿ ಕಲ್ಚೆರ್ಪೆಯಲ್ಲಿ ವಿಲೇವಾರಿ ಮಾಡಲು ಪುತ್ತೂರು ಸಹಾಯಕ ಕಮಿಷನರ್ ಡಾ.ಯತೀಶ್ ಉಳ್ಳಾಲ್ ನೇತೃತ್ವದಲ್ಲಿ ಸುಳ್ಯ ತಾಲೂಕು ಕಚೇರಿಯಲ್ಲಿ ನಡೆದ ನ.ಪಂ. ಅಧಿಕಾರಿಗಳ ಸಭೆಯಲ್ಲಿ ನಿರ್ಣಯಿಸಲಾಗಿದೆ.
ನ.ಪಂ. ಆಡಳಿತಾಧಿಕಾರಿ ಹಾಗು ತಹಶೀಲ್ದಾರ್ ಅನಂತಶಂಕರ್, ನ.ಪಂ. ಮುಖ್ಯಾಧಿಕಾರಿ ಎನ್.ಮತ್ತಡಿ ಹಾಗೂ ಇತರ ಅಧಿಕಾರಿಗಳ ಜೊತೆಯಲ್ಲಿ ಚರ್ಚೆ ನಡೆಸಲಾಯಿತು. ಕಲ್ಚೆರ್ಪೆಯಲ್ಲಿರುವ ನಗರ ಪಂಚಾಯಿತಿಯ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಆಧುನಿಕ ಯಂತ್ರಗಗಳನ್ನು ಅಳವಡಿಸಿ ತ್ಯಾಜ್ಯವನ್ನು ವಿಲೇವಾರಿ ಮಾಡುವುದು. ಅಲ್ಲದೆ ಈ ಕುರಿತು ಸ್ಥಳೀಯರೊಂದಿಗೆ ಸಮಾಲೋಚನೆ ನಡೆಸಲು ಎ.ಸಿ.ಯವರು ಸೂಚನೆ ನೀಡಿದರು. ಸಹಾಯಕ ಕಮೀಷನರ್ ಉಪಸ್ಥಿತಿಯಲ್ಲಿ ಕಲ್ಚೆರ್ಪೆಯಲ್ಲಿ ಸಭೆ ನಡೆಸಿ ಊರ ಪ್ರಮುಖರೊಂದಿಗೆ ಚರ್ಚಿಸಲು ಮತ್ತು ಆಧುನಿಕ ಯಂತ್ರಗಳ ಮತ್ತು ತಂತ್ರಜ್ಞಾನದ ಕುರಿತು ಊರವರಿಗೆ ಮನವರಿಕೆ ಮಾಡಿಕೊಡಲು ನಿರ್ಧರಿಸಲಾಗಿದೆ.