ಮೈಸೂರು: ಮಂಡ್ಯದಲ್ಲಿ ನಡೆದ ಮರ್ಯಾದೆ ಹತ್ಯೆ ಜನರ ಮನಸ್ಸಿನಲ್ಲಿ ಮಾಸುವ ಮುನ್ನವೆ ಸಿ.ಎಂ. ತವರು ಜಿಲ್ಲೆಯಲ್ಲಿ ಮರ್ಯಾದೆ ಹತ್ಯೆ ನಡೆದಿರುವ ಶಂಕೆಯ ಹಿನ್ನಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ನಂಜನಗೂಡು ತಾಲ್ಲೂಕಿನ ಚಂದರವಾಡಿ ಗ್ರಾಮದ ಪೋಷಕರನ್ನು ತನಿಖೆಗೆ ಒಳಪಡಿಸಿದ್ದಾರೆ.
ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಹುಲ್ಲಳಿ ಠಾಣಾ ವ್ಯಾಪ್ತಿಯ ಚಂದರವಾಡಿ ಗ್ರಾಮದ 21 ವರ್ಷದ ಮಧು ಎಂಬಾಕೆಯನ್ನು ಪೋಷಕರು ಅನ್ಯ ಕೋಮಿನ ಯುವಕನನ ಪ್ರೀತಿಸಿದಕ್ಕೆ ಸುಳಿವು ಸಿಗದ ರೀತಿಯಲ್ಲಿ ಹತ್ಯೆಮಾಡಿ ಸುಟ್ಟು ಹಾಕಿದ್ದು ಈ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಖರೆ ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಶವವನ್ನು ಸುಟ್ಟುಹಾಕಿರುವ ಬೂದಿ ಮತ್ತು ಅಸ್ಥಿ ಪಂಚರಗಳನ್ನು ಸಂಗ್ರಸಿಸುವಂತೆ ಪೊಲೀಸರಿಗೆ ಸೂಚನೆ ನೀಡಿದ್ದು, ಇದರ ನಡುವೆ ಮದು ಪೋಷಕರನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.
ಅನಮಾದೇಯ ಕರೆಯಿಂದ ಮರ್ಯಾದೆ ಹತ್ಯೆ ಬೆಳಕಿಗೆ:
ಚಂದರವಾಡಿ ಗ್ರಾಮದ ಮೇಲ್ಜಾತಿಗೆ ಸೇರಿದ ಮದು ಪದವಿ ವ್ಯಾಸಂಗ ಮಾಡುತ್ತಿದು ಅದೇ ಗ್ರಾಮದ ಕೆಳಜಾತಿಯ ಯುವಕನನ್ನು ಪ್ರೀತಿಸುತ್ತಿದಳು. ಇವರಿಬ್ಬರು ಓಡಿ ಹೋಗಿ ಮದುವೆಯಾಗಲು ಚಿಂತನೆ ನಡೆಸಿದ್ದು, ಈ ವಿಚಾರ ತಿಳಿದ ಪೋಷಕರು ಬುದ್ದಿವಾದ ಹೇಳಿದರು. ಕೇಳದಿದ್ದಾಗ ನಿನ್ನೆ ಮಧ್ಯರಾತ್ರಿ ಯುವತಿಯನ್ನು ಕೊಲೆಮಾಡಿ ಯಾರಿಗೂ ಗೊತ್ತಿಲ್ಲದ ರೀತಿಯಲ್ಲಿ ಸುಟ್ಟು ಹಾಕಿದ್ದು ಈ ಬಗ್ಗೆ ಅನುಮಾನಗೊಂಡ ಗ್ರಾಮದ ಯುವಕನೊಬ್ಬ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಖರೆಗೆ ಕಾಯನ್ ಬಾಕ್ಸ್ ಮೂಲಕ ದೂರವಾಣಿ ಕರೆ ಮಾಡಿ ಮರ್ಯಾದೆ ಹತ್ಯೆಯ ಬಗ್ಗೆ ತಿಳಿಸಿದ್ದು ಕೂಡಲೇ ಹುಲ್ಲಹಳ್ಳಿ ಠಾಣೆಗೆ ಭೇಟಿ ನೀಡಿದ ಪೊಲೀಸ್ ವರಿಷ್ಠಾಧಿಕಾರಿ ಠಾಣಾ ಸಿಬ್ಬಂದಿಯೊಂದಿಗೆ ಘಟನೆ ನಡೆದ ಚಂದರವಾಡಿ ಗ್ರಾಮಕ್ಕೆ ಭೇಟಿ ನೀಡಿ ಹತ್ಯೆ ನಡೆದ ಸ್ಥಳ ಪರಿಶೀಲನೆ ನಡೆಸಿ ಹತ್ಯೆ ನಡೆದ ಸ್ಥಳದಲ್ಲಿ ಹೆಚ್ಚಿನ ಪೊಲೀಸ್ ಬಂದೂಬಸ್ತನ್ನು ಹಾಕಿ ಸ್ಥಳದಲ್ಲೆ ಮೊಕ್ಕಾಮ್ ಹೂಡಿದ್ದಾರೆ.
ಘಟನೆ ನಡೆದ ಸ್ಥಳದಲ್ಲಿ ಬೂದಿ, ಮೂಳೆಗಳನ್ನು ಸಂಗ್ರಹಿಸಿ ಮೃತ ಮಧುವಿನ ಪೋಷಕರನ್ನು ವಶಕ್ಕೆ ಪಡೆದು ತೀವ್ರ ತನಿಖೆಗೆ ಒಳಪಡಿಸಿದ್ದಾರೆ.