News Karnataka Kannada
Monday, May 06 2024
ಮಂಗಳೂರು

ಅಫ್ಘಾನಿಸ್ತಾನ ದಿಂದ ಸಿದ್ಧಕಟ್ಟೆಯ ವಂ.ಜೆರೋಮ್ ಸಿಕ್ವೆರಾ ದೆಹಲಿಗೆ ಆಗಮನ

Afghan 19082021
Photo Credit :

ಬಂಟ್ವಾಳ : ಅಫ್ಘಾನಿಸ್ತಾನದಲ್ಲಿ ಸಿಲುಕಿದ್ದ ದ.ಕ.ಜಿಲ್ಲೆಯ ಬಂಟ್ವಾಳ ತಾಲೂಕಿನ ಸಿದ್ದಕಟ್ಟೆ , ಕಲ್ಕುರಿ ನಿವಾಸಿ ಧರ್ಮಗುರು ವಂ. ಜೆರೋಮ್ ಸಿಕ್ವೆರಾ ಎಸ್.ಜೆ. ಅವರು ಇಂದು  ಬೆಳಗ್ಗೆ ದೆಹಲಿಗೆ ಆಗಮಿಸಿದ್ದಾರೆ ಎಂದು ತಿಳಿದು ಬಂದಿದೆ.
ವಂ.ಜೆರೋಮ್ ಅವರು ಅಫ್ಘಾನಿಸ್ಥಾನದಲ್ಲಿ ಸಂಸ್ಥೆಯೊಂದರಲ್ಲಿ ಮುಖ್ಯಸ್ಥರಾಗಿದ್ದು, ತಾಲಿಬಾನ್ ಉಗ್ರರು ದೇಶವನ್ನು ಕೈವಶ ಮಾಡಿಕೊಳ್ಳುತ್ತಿದ್ದಂತೆ ಭಾರತಕ್ಕೆ ಮರಳಲು ತಮ್ಮ ಸ್ನೇಹಿತ, ತೀರ್ಥಹಳ್ಳಿಯ ರಾಬರ್ಟ್ ರೊಡ್ರಿಗಸ್ ಅವರಿಗಾಗಿ ವಿಮಾನ ನಿಲ್ದಾಣದಲ್ಲಿ ಕಾಯುತ್ತಿದ್ದಂತೆ ತಾಲಿಬಾನಿಗಳು ವಿಮಾನ ನಿಲ್ದಾಣ ವಶಪಡಿಸಿಕೊಂಡಿದ್ದರಿಂದ ಅಲ್ಲಿಯೇ ಉಳಿದಿದ್ದರು.

ಇದೀಗ ಅವರ ಜತೆ ರಾಬರ್ಟ್ ಅವರೂ ದೆಹಲಿ ತಲುಪಿದ್ದಾರೆ ಎಂದು ತಿಳಿದು ಬಂದಿದೆ. ವಂ.ಜೆರೊಮ್ ಅವರು ದೆಹಲಿಯಿಂದ ತಮ್ಮ ತವರೂರು ಸಿದ್ದಕಟ್ಟೆ ಕರ್ಪೆ ಗೆ ಬರುವ ಬಗ್ಗೆ ಇನ್ನು ಸ್ಪಷ್ಟತೆ ಇಲ್ಲ, ಅವರ ಮನೆಮಂದಿಕೂಡ ಈ ಬಗ್ಗೆ  ಯಾವುದೇ ಮಾಹಿತಿಯನ್ನು ನೀಡುತ್ತಿಲ್ಲ. ಜೆರೋಮ್ ಅವರು ದೆಹಲಿಯಿಂದಲೇ ಈ ಹಿಂದೆ ಇದ್ದ ಜೆಮ್ಸಡ್ ಪುರಕ್ಕೆ ತೆರಳಲಿದ್ದಾರೆಂಬ ಮಾಹಿತಿ ಲಭ್ಯವಾಗಿದೆ. ವಂ.ಜೋರೊಮ್ ಸಿಕ್ವೆರಾ ಅವರು ಅಪ್ಘಾನಿಸ್ಥಾನದಿಂದ ಸ್ವದೇಶಕ್ಕೆ ಅಗಮಿಸಿರುವ ಹಿನ್ನಲೆಯಲ್ಲಿ‌ಕರ್ಪೆಯಲ್ಲಿರುವ ಅವರ ಮನೆ ಮಂದಿಗಳು,ಬಂಧುಗಳು ಸದ್ಯ ನಿಟ್ಟಿಸಿರು ಬಿಟ್ಟಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
153
Mounesh V

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು