ಬಂಟ್ವಾಳ :ಬಂಟ್ವಾಳ ತಾಲೂಕು ಕೃಷಿ ಉತ್ಪನ್ನ ಸಹಕಾರಿ ಮಾರಾಟ ಸಂಘ ನಿಯಮಿತವು 2020-21 ನೇ ಸಾಲಿನಲ್ಲಿ 19.28 ಲಕ್ಷ ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.10 ಡಿವಿಡೆಂಟ್ ನ್ನು ಸಂಘದ ಅಧ್ಯಕ್ಷ ರವೀಂದ್ರ ಕಂಬಳಿ ಘೋಷಿಸಿದ್ದಾರೆ.
ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ಮಂಗಳವಾರ ನಡೆದ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರಸಕ್ತ ಸಾಲಿನ ಲೆಕ್ಕಪರಿಶೋಧನಾ ವರದಿಯಲ್ಲಿಯೂ ಸಂಘವು ‘ಎ’ ವರ್ಗದ ಮನ್ನಣೆ ಪಡೆದುಕೊಂಡಿದೆ ಎಂದು ತಿಳಿಸಿದರು.
ಸಂಘವು ವರ್ಷಾಂತ್ಯಕ್ಕೆ 19.38 ಕೋಟಿ ರೂ. ಪಾಲು ಬಂಡವಾಳ, 17.94 ಕೋಟಿ ರೂ. ನಿರಖು ಠೇವಣಿಯನ್ನು ಹೊಂದಿದೆ ಎಂದು ಹೇಳಿದ ಅವರು ಸಂಘವು 3.51 ಕೋಟಿ ಹೊರಬಾಕಿ ಸಾಲ ನೀಡಿರುತ್ತದೆ, ತಾಲೂಕಿನಎಲ್ಲಾನ್ಯಾಯಬೆಲೆ ಅಂಗಡಿಗಳಿಗೆ ಪಡಿತರ ವಿತರಣಾ ವ್ಯವಸ್ಥೆಯನ್ನು ಸಂಘದವತಿಯಿಂದ ಮಾಡಲಾಗುತ್ತಿದ್ದು, ಕೃಷಿಕರ ವ್ಯವಸಾಯಕ್ಕೆ ಬೇಕಾದ ಕ್ರಿಮಿನಾಶಕ, ಸಲಕರಣೆಗಳು ಸಂಘದ ಬಂಟ್ವಾಳ ಶಾಖೆಯಲ್ಲಿ ಮಾರಾಟಮಾಡಲಾಗುತ್ತಿದೆ ಎಂದರು. ಬಿ.ಸಿ.ರೋಡ್ ನಲ್ಲಿ ಸಂಘವು ಸ್ವಂತ ಕಟ್ಟಡವನ್ನು ಹೊಂದಿದ್ದು, 3 ಶಾಖೆಗಳ ಮೂಲಕ ವ್ಯವಹಾರ ನಡೆಸುತ್ತಿದೆ, ಬಂಟ್ವಾಳ ಶಾಖೆಯಲ್ಲಿ ಬ್ಯಾಂಕಿಂಗ್ ವ್ಯವಹಾರ ಮತ್ತು ಪಡಿತರ ವಿತರಣಾ ವ್ಯವಸ್ಥೆಯನ್ನು ಹೊಂದಿರುತ್ತದೆ ಎಂದರು.
ಆರ್ಥಿಕ ವ್ಯವಹಾರದ ಜೊತೆಯಲ್ಲಿ ಕೊರೋನಾ ಸಂದರ್ಭದಲ್ಲಿ ಕಿಟ್ ವಿತರಣೆ, ಲಸಿಕೆ ನೀಡಿಕೆ ಶಿಬಿರದಂತಾ ಚಟುವಟಿಕೆಗಳ ಮೂಲಕ ಸಕ್ರೀಯವಾಗಿ ತೊಡಗಿಸಿಕೊಂಡಿದ್ದು, ಸಂಸ್ಥೆಯ ಅಭಿವೃದ್ಧಿಗೆ ಸಿಬ್ಬಂದಿಗಳು, ನಿರ್ದೇಶಕ ಮಂಡಳಿಯ ಸಹಕಾರದ ಜೊತೆಗೆ ಗ್ರಾಹಕರ ಪ್ರೋತ್ಸಾಹವೂ ಅತೀ ಅಗತ್ಯವಾಗಿದೆ ಎಂದರು.
ಉಪಾಧ್ಯಕ್ಷೆ ಶಶಿಕಲಾ ಉಡುಪ, ನಿರ್ದೇಶಕರಾದ ಉಮೇಶ್ ಪೂಜಾರಿ,ರಾಜೇಶ ಶೆಟ್ಟಿ,ಜ್ಞಾನೇಶ್ವರ ಪ್ರಭು, ವೆಂಕಟ್ರಾಯ ಪ್ರಭು, ಮನೋರಾಜ್ ಎ., ರೋಹಿನಾಥ್ ಕೆ., ಬಿ.ಟಿ.ನಾರಾಯಣ ಭಟ್, ಸುಂದರ ಭಂಡಾರಿ,ಪದ್ಮನಾಭ ಕಿದೆಬೆಟ್ಟು, ರತ್ನ, ಪೂವಪ್ಪ, ರಾಮನಾಯ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯು.ಧರ್ಮಪಾಲ ಭಂಡಾರಿ ಸ್ವಾಗತಿಸಿ,ವರದಿ ವಾಚಿಸಿ, ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕ ವೆಂಕಟೇಶ ನಾವಡ ಪೊಳಲಿ ವಂದಿಸಿದರು.