ಯಾದಗಿರಿ : ಲಾರಿ ಅಟೋ ಮದ್ಯೆ ಶುಕ್ರವಾರ ರಾತ್ರಿ ಅಪಘಾತ ಸಂಣಬಿಸಿದ್ದು, ಮೂವರು ಸ್ಥಳದಲ್ಲಿಯೇ ಸಾವನಪ್ಪಿದ್ದು, 6 ಮಂದಿ ತೀವ್ರ ಅಪಘಾತಕ್ಕೆ ಒಳಗಾಗಿದ್ದಾರೆ.
ನಗರದ ಹೊರವಲಯದ ಮುದ್ನಾಳ ಕ್ರಾಸ್ ಹತ್ತಿರ ಮಹಾರಾಷ್ಟ್ರಕ್ಕೆ ಸೇರಿದ ಲಾರಿಯೊಂದು ಪ್ಯಾಸೆಂಜರ ಅಟೋ ಮಧ್ಯೆ ರಾತ್ರಿ 12.30 ಕ್ಕೆ ಅಪಘಾತ ಸಂಭವಿಸಿದೆ.
ಅಟೋದಲ್ಲಿ ಪ್ರಯಾಣಿಸುತ್ತಿದ್ದ ಲಕ್ಷ್ಮಣ ನಾಮದೇವ (25) , ಜಯರಾಮ ರಾಮಚಂದ್ರ (45) ಹಾಗೂ 2.5 ತಿಂಗಳ ಮಗು ಕೃಷ್ಣಾ ಸ್ಥಳದಲ್ಲಿ ಮೃತರಾಗಿದ್ದಾರೆ.
ಸಣ್ಣಪುಟ್ಟ ಗಾಯಗೊಂಡವರನ್ನು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತಪಟ್ಟವರೆಲ್ಲ ಕಂಚಗಾರಹಳ್ಳಿ ತಾಂಡಾದವರೆOದು ಗುರುತಿಸಲಾಗಿದೆ. ಪ್ರಕರಣವ್ನು ನಗರ ಸಂಚಾರಿ ಪೊಲೀಸ ಠಾಣೆಯಲ್ಲಿ ದಾಖಲಿಸಕೊಂಡು ತನಿಖೆ ಮುಂದುವರಿಸಿದ್ದಾರೆ.