ಯಾದಗಿರಿ : ಶಹಾಪೂರದ ಜೆ.ಎಮ್.ಎಫ್.ಸಿ ನ್ಯಾಯಾಲಯದ ವಿಚಾರಣಾಧೀನ ಆರೋಪಿ ಭೀಮಾಶಂಕರ, ತಂದೆ ಹಯ್ಯಾಳಪ್ಪ ತಿಪನಟಗಿ, ಸಾ.ಇಟಗಾ(ಎಸ್) ಈತನು ಹಲವು ದಿನಗಳಿಂದ ವಿಚಾರಣೆಗೆ ಹಾಜರಾಗದೇ, ವಿಳಾಸದಲ್ಲಿ ಸಿಗದೆ ನಾಪತ್ತೆಯಾಗಿದ್ದು, ಈತನ ಸುಳಿವಿಗೆ ಭೀಮರಾಯನಗುಡಿ ಪೊಲೀಸ್ ಠಾಣೆಯ ಆರಕ್ಷಕ ಉಪ ನೀರಿಕ್ಷಕರು ಮನವಿ ಮಾಡಿದ್ದಾರೆ.
ಆರೋಪಿತನಾದ ಭೀಮಾಶಂಕರ ತಲೆಮರಿಸಿಕೊಂಡು ತಿರುಗುತ್ತಿದ್ದಾನೆ. ಆರೋಪಿ ಕಂಡು ಬಂದಲ್ಲಿ ಅಥವಾ ಈತನು ಇರುವಿಕೆಯ ಬಗ್ಗೆ ಯಾರಿಗಾದರೂ ಸಾರ್ವಜನಿಕರಿಗೆ ಕಂಡು ಬಂದಲ್ಲಿ ಭೀಮಾರಾಯನಗುಡಿ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಪ್ರಕಟಣೆ ತಿಳಿಸಿದೆ.