ಕಲಬುರಗಿ: ಯೇಸುಕ್ರಿಸ್ತನು ಶಿಲುಬೆಗೆ ಹಾಕುವ ಮುನ್ನ ಜೆರುಸಲೇಮಿಗೆ ಪ್ರವೇಶಿಸಿದನು. ಆಗ ಜನರೆಲ್ಲರೂ ಖರ್ಜೂರದ ಗರಿಗಳನ್ನು ತೆಗೆದುಕೊಂಡು ಆತನನ್ನು ಎದುರುಗೊಳ್ಳುವುದಕ್ಕೆ ಹೋದರು.
ಜರುಸಲೇಮಿನ ಜನರೆಲ್ಲರೂ ‘ಜಯ ಕರ್ತನಾ ಹೆಸರಿನಲ್ಲಿ ಬರುವವನಿಗೆ ಆಶೀರ್ವಾದ. ಇಸ್ರಾಯೇಲಿನ ಅರಸನಿಗೆ ಆಶೀರ್ವಾದ’ ಎಂದು ಕೂಗಿದರು. ಯೇಸು ಕತ್ತೆಮರಿಯನ್ನು ತರಿಸಿಕೊಂಡು ಅದರ ಮೇಲೆ ಕುಳಿತುಕೊಂಡು ಊರೊಳಗೆ ಪ್ರವೇಶಿಸಿದನು ಎಂಬ ಐತಿಹ್ಯವಿದೆ.
ನಗರದ ಜೆಸ್ಕಾಂ ಪ್ರಧಾನ ಕಚೇರಿಯ ಹತ್ತಿರ ಹಿಂದುಸ್ತಾನ್ ಕವನೆಂಟ್ ಚರ್ಚ್ನಲ್ಲಿ ಇತ್ತೀಚೆಗೆ ಖರ್ಜೂರದ ಗರಿಗಳ ಹಬ್ಬವನ್ನು ಆಚರಿಸಲಾಯಿತು.
ಚರ್ಚಿನ ಫಾದರ್ ಸಾಮುವೇಲ್ ಭಾಲೇಕರ್ ಹಾಗೂ ಕ್ರೈಸ್ತರು ಈ ಹಬ್ಬದಲ್ಲಿ ಭಾಗವಹಿಸಿದ್ದರು.