News Karnataka Kannada
Saturday, April 27 2024
ಕಲಬುರಗಿ

ಅಮರಣಾಂತ ಉಪವಾಸ ಸತ್ಯಾಗ್ರಹ: ನಾಟಿಕಾರ ಆರೋಗ್ಯದಲ್ಲಿ ಏರುಪೇರು

ಕಳೆದ ಎಂಟು ದಿನಗಳಿಂದ ಶಿವಕುಮಾರ ನಾಟಿಕಾರ ನೇತೃತ್ವದಲ್ಲಿ ನಡೆಯುತ್ತಿರುವ ಅಮರಣಾಂತ ಉಪವಾಸ ಸತ್ಯಾಗ್ರಹದಲ್ಲಿಂದು ದಿಢೀರನೆ ನಾಟಿಕಾರ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡಿದ್ದು,ಕೂಡಲೇ ವಿಜಯಪುರ ಜಿಲ್ಲೆಗೆ ಅಂಬ್ಯುಲೆನ್ಸ್ ಮುಖಾಂತರ ಆಸ್ಪತ್ರೆಗೆ ರವಾನಿಸಲಾಯಿತು.
Photo Credit : NewsKarnataka

ಅಫಜಲಪುರ: ಕಳೆದ ಎಂಟು ದಿನಗಳಿಂದ ಶಿವಕುಮಾರ ನಾಟಿಕಾರ ನೇತೃತ್ವದಲ್ಲಿ ನಡೆಯುತ್ತಿರುವ ಅಮರಣಾಂತ ಉಪವಾಸ ಸತ್ಯಾಗ್ರಹದಲ್ಲಿಂದು ದಿಢೀರನೆ ನಾಟಿಕಾರ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡಿದ್ದು,ಕೂಡಲೇ ವಿಜಯಪುರ ಜಿಲ್ಲೆಗೆ ಅಂಬ್ಯುಲೆನ್ಸ್ ಮುಖಾಂತರ ಆಸ್ಪತ್ರೆಗೆ ರವಾನಿಸಲಾಯಿತು.

ಎಂಟು ದಿನಗಳಿಂದ ಶಿವಕುಮಾರ ನಾಟಿಕಾರ ಬರಿ ನೀರು ಕುಡಿದು ತುತ್ತು ಆಹಾರ ಸೇರಿಸದೆ ಪ್ರತಿಭಟನಾ ನಿರತರಾಗಿದ್ದರು. ಜಿಲ್ಲಾ ಅಧಿಕಾರಿಗಳ ತಂಡ ತಾಲೂಕು ಅಧಿಕಾರಿಗಳ ತಂಡ ಸೇರಿದಂತೆ ಜನಪ್ರತಿನಿಧಿಗಳು ಉಪವಾಸ ಸತ್ಯಾಗ್ರಹ ಕೈಬಿಡುವಂತೆ ಕೇಳಿಕೊಂಡರು ಭೀಮಾ ನದಿಗೆ ನೀರು ಹರಿಸುವ ವರೆಗೂ ನಾನು ಆಹಾರ ಸೇವಿಸಲ್ಲ ನನ್ನ ಜನರಿಗಾಗಿ ನನ್ನ ಪ್ರಾಣ ಹೊದರು ಚಿಂತೆ ಇಲ್ಲ. ಭೀಮಾ ನದಿಗೆ ನೀರು ಹರಿ ಬಿಟ್ಟಾಗ ಮಾತ್ರ ಆಹಾರ ಸೇವಿಸುವುದಾಗಿ ಹೇಳುತ್ತಾ ಬಂದಿದ್ದರು.

ಇವತ್ತು ಹಠಾತ್ ಅವರ ಆರೋಗ್ಯದಲ್ಲಿ ಬದಲಾವಣೆಯಾಗಿದ್ದನ್ನು ಗಮನಿಸಿದ ಹೋರಾಟಗಾರರು ಪಕ್ಕದ ವಿಜಯಪುರ ಜಿಲ್ಲಾಸ್ಪತ್ರೆಗೆ ಕರೆದೊಯ್ದರು. ಅಂಬ್ಯುಲೇನ್ಸನಲ್ಲಿ ಅವರನ್ನ ಕರೆದೊಯ್ಯುವ‌ತ್ತಿರುವ ಬೆನ್ನಲ್ಲೇ, ನಾಟಿಕಾರ ಬೆಂಬಲಿಗರ ತಂಡ ಆಕ್ರೋಶ ಭರಿತರಾಗಿ ರಸ್ತೆ ತಡೆದು ಜಿಲ್ಲಾಡಳಿತ ಮತ್ತು ರಾಜ್ಯ ಸರಕಾರದ ವಿರುದ್ದ ಹರಿಹಾಯ್ದರು.

ಸ್ಥಳಕ್ಕೆ ಧಾವಿಸಿದ ಅಫಜಲಪುರ ಠಾಣಾ ಪೊಲೀಸರು ಉದ್ವಿಗ್ನ ವಾತಾವರಣ ತಿಳಿಗೊಳಿಸಿದರು.ಒಂದು ವೇಳೆ ನಾಟಿಕಾರ ಅವರ ಜೀವಕ್ಕೆ ತೊಂದರೆ ಆದರೆ ಅದಕ್ಕೆ ನೇರ ಹೊಣೆ ಜಿಲ್ಲಾಡಳಿತ ಮತ್ತು ರಾಜ್ಯ‌ಸರಕಾರವೇ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು