ಕಲಬುರಗಿ: ಬೆಂಗಳೂರಿನಲ್ಲಿರುವ ನನ್ನ ವಿಕಾಸಸೌಧ ಕಚೇರಿಗೆ 10 ದಿನಗಳ ಹಿಂದೆ ನಿನ್ನನ್ನು ಎನ್ ಕೌಂಟರ್ ಮಾಡಿ ಮುಗಿಸುತ್ತೇವೆ ಎಂದು ಪತ್ರ ಬಂದಿತ್ತು ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಅದು ಕಲಬುರಗಿಯಿಂದಲೇ ಪೋಸ್ಟ್ ಆಗಿದ್ದು ಕನ್ಫರ್ಮ್ ಆಗಿದೆ. ಇಬ್ಬರು ವ್ಯಕ್ತಿಗಳು ಸಹಿ ಮಾಡಿದ ಆ ಪತ್ರದ ಬಗ್ಗೆ ತನಿಖೆ ಮಾಡುವಂತೆ ವಿಧಾನ ಸೌಧ ಪೋಲೀಸರಿಗೆ ತಿಳಿಸಿದ್ದೇನೆ. ಮಾತ್ರವಲ್ಲ ಎಫ್ ಐಆರ್ ಸಹ ದಾಖಲಿಸಿದ್ದೇನೆ ಎಂದು ಅವರು ಸುದ್ದಿಗೋಷ್ಠಿ ನಡೆಸಿ ತಿಳಿಸಿದ್ದಾರೆ.