ಅಫಜಲಪುರ: ತಾಲೂಕಿನ ಬಳೂರ್ಗಿ ಗ್ರಾಮದ ರೈತ ಮಹ್ಮದ ರಫಿ ಮಕ್ತುಂಸಾಬ್ ಅವರ ತೋಟದಲ್ಲಿನ ಸುಮಾರು 1500 ಬಾಳೆ ಗಿಡಗಳು ಸಂಪೂರ್ಣವಾಗಿ ಗಾಳಿ ಮಳೆಗೆ ಧರೆಗುರುಳಿವೆ.
ಇನ್ನೇನು ಬಾಳೆ ಗಿಡಗಳು ಕೊಯ್ಯುವ ಹಂತದಲ್ಲಿದೆ ಎನ್ನುವಷ್ಟರಲ್ಲಿ ನಿನ್ನೆ ಸುರಿದ ಗಾಳಿ ಸಹಿತ ಮಳೆಗೆ ಸಂಪೂರ್ಣವಾಗಿ ಹಾಳಾಗಿ ಹೋಗಿವೆ. ಸುಮಾರು 30 ಲಕ್ಷ ರೂಪಾಯಿ ಮೌಲ್ಯದ ಬಾಳೆ ಬೆಳೆ ನಾಶವಾಗಿರುವುದು ರೈತನ ದುಃಖಕ್ಕೆ ಕಾರಣವಾಗಿದೆ.
ಸರಕಾರದ ಪರಿಹಾರದ ನಿರೀಕ್ಷೆಯಲ್ಲಿ ರೈತ ನಿರೀಕ್ಷೆಯಲ್ಲಿದ್ದಾನೆ.ಬಳೂರ್ಗಿ ಗ್ರಾಮದ ಸರ್ವೇ ನಂಬರ 283 ರಲ್ಲಿನ 3.19 ಎಕರೆ ಬಾಳೆ ತೋಟ ನಾಶವಾಗಿದೆ.