ಬೀದರ್: ಜಿಲ್ಲೆಯಲ್ಲಿ ಸುರಿದಿರುವ ಆಲಿಕಲ್ಲು ಮಳೆಯಿಂದ ಹಾನಿಗೋಳಗಾದ ಸುಮಾರು 7242 ಹೆಕ್ಟರ್ ಪ್ರದೇಶದ ಬೆಳೆ ಹಾನಿಗೆ ರೂ. 785.91 ಲಕ್ಷ ಪರಿಹಾರ ಬಿಡುಗಡೆ ಮಾಡುವಂತೆ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಪತ್ರ ಬರೆದು. ಜೊತೆಗೆ ಮುಖ್ಯಮಂತ್ರಿಗಳೊಂದಿಗೆ ಹಾಗೂ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ದೂರವಾಣಿ ಮೂಲಕ ಮಾತನಾಡಿ ಶೀಘ್ರದಲ್ಲಿ ಪರಿಹಾರ ಬಿಡುಗಡೆಗೆ ಮನವಿ ಮಾಡಿಕೊಂಡಿರುವೆ ಎಂದು ಕೇಂದ್ರ ನವೀಕರಿಸಬಹುದಾದ ಇಂಧನ ಮೂಲ, ರಾಸಾಯನಿಕ ಮತ್ತು ರಸಗೋಬ್ಬರ ಖಾತೆ ರಾಜ್ಯ ಸಚಿವ ಭಗವಂತಿ ಖೂಬಾ ಅವರು ಸೋಮವಾರ ನಡೆದ ದಿಶಾ ಸಮಿತಿ ಸಭೆಯಲ್ಲಿ ಹೇಳಿದರು.
ಇತ್ತೀಚೆಗೆ ಬೀದರ್ ಜಿಲ್ಲೆಗೆ ಸೋಲಾರ್ ಪಾರ್ಕ್ ಮಂಜೂರಾಗಿದ್ದು, ಇದಕ್ಕೆ ಅವಶ್ಯಕವಾಗಿರುವ 2500 ಎಕ್ಕರೆ ಭೂಮಿಯನ್ನು ಜಿಲ್ಲಾಡಳಿತ ಒದಗಿಸಿಕೊಡಬೇಕು ಹಾಗೂ ಪಾರ್ಕಗೆ ನೀಡುವ ಜಮೀನಿನ ಮಾಲಿಕರು ರೈತರೇ ಆಗಿರುತ್ತಾರೆ ಎಂದರು.