ಬೀದರ್ : ವಿದ್ಯುತ್ ಶಾಟ್ ಸರ್ಕ್ಯೂಟ್ನಿಂದಾಗಿ ಮನೆಗೆ ಬೆಂಕಿ ತಗುಲಿ ಹಾನಿಗೊಳಗಾದ ಬೀದರ್ ತಾಲ್ಲೂಕಿನ ಇಸ್ಲಾಂಪುರ ಗ್ರಾಮದ ದತ್ತು ವಾಘಮೋಡೆ ಅವರಿಗೆ ಯುವ ಮುಖಂಡ ತರುಣ್ ಸೂರ್ಯಕಾಂತ ನಾಗಮಾರಪಳ್ಳಿ ಅವರು ನೆರವಾಗುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಬೆಂಕಿ ದುರಂತದಲ್ಲಿ ವಾಘಮೋಡೆ ಅವರ ಮನೆಯಲ್ಲಿದ್ದ ಫ್ರಿಡ್ಜ್, ಟಿವಿ ಮೊದಲಾದ ಸಾಧನ, ಬಟ್ಟೆ, ದವಸ ಧಾನ್ಯ ಸುಟ್ಟಿದ್ದವು. ವಿಷಯ ತಿಳಿಯುತ್ತಲೇ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಸೂರ್ಯಕಾಂತ ನಾಗಮಾರಪಳ್ಳಿ ಅವರು ಸಂತ್ರಸ್ತ ಪರಿವಾರಕ್ಕೆ ನೆರವಾಗುವಂತೆ ತಮ್ಮ ಪುತ್ರ ತರುಣ್ ಅವರಿಗೆ ಸೂಚಿಸಿದ್ದರು.
ತಕ್ಷಣ ಗ್ರಾಮಕ್ಕೆ ಧಾವಿಸಿದ ತರುಣ್ ಅವರು ಸಂತ್ರಸ್ತ ಪರಿವಾರಕ್ಕೆ ಧೈರ್ಯ ತುಂಬಿದರು. ಡಾ. ಗುರುಪಾದಪ್ಪ ನಾಗಮಾರಪಳ್ಳಿ ಫೌಂಡೇಷನ್ ವತಿಯಿಂದ ಹಾಗೂ ವೈಯುಕ್ತಿವಾಗಿ ಆರ್ಥಿಕ ನೆರವು ನೀಡಿದರು. ಸರ್ಕಾರದಿಂದಲೂ ನಿಯಮಾನುಸಾರ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದರು.
ಗ್ರಾಮದ ಹಿರಿಯರಾದ ಗುರಪ್ಪ ರಕ್ಷೆ, ಹಣಮಂತ ವಾಘಮಾರೆ, ಬಸವರಾಜ ಮೂಲಗೆ, ರವಿ ಜಾಧವ್, ಟೀಮ್ ಟಿಎಸ್ಎನ್ನ ಯಲ್ಲಾಲಿಂಗ ಜೀರ್ಗೆ, ಮಾಣಿಕ ರಕ್ಷೆ, ರಾಜು ಜೀರ್ಗೆ ಇದ್ದರು.