ಬೀದರ್: ಬೀದರ ದಕ್ಷಿಣ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಬರುವ ಯಕಾತಫೂರ , ಗ್ರಾಮದ ಯುವಕರು ಬೀದರ ದಕ್ಷಿಣ ಕ್ಷೇತ್ರದ ಮಾಜಿ ಶಾಸಕರಾದ ಅಶೋಕ ಖೇಣಿ ರವರ ಅಭಿವೃದ್ಧಿ ಕಾರ್ಯ ಕಾಂಗ್ರೆಸ್ ಪಕ್ಷದ ಸಿದ್ಧಾಂತ ಮೆಚ್ಚಿ ಅನ್ಯ ಪಕ್ಷ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಅವರಿಗೆ ಮಾನ್ಯ ಅಶೋಕ ಖೇಣಿ ರವರು ಹಾಗೂ ಬ್ಲಾಕ ಕಾಂಗ್ರೆಸ್ ಕಮಿಟಿಯ ಅಧ್ಯಕ್ಷರಾದ ಕರೀಮ ಸಾಬ ಕಮಠಾಣ ಕೆಪಿಸಿಸಿ ಸಂಯೋಜಕರಾದ ಶರಣು ಪಾಟೀಲ ರವರು ಪಕ್ಷದ ಬಾವುಟ ಕೊಟ್ಟು, ಪಕ್ಷದ ಶಾಲು ಹೊದಿಸಿ ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಲೇಬರ್ ಸೇಲ್ ಜಿಲ್ಲಾಧ್ಯಕ್ಷರಾದ ರಮೇಶ ಹೌದಖಾನಿ, ರಾಜ್ಯ ಕಿಸಾನ್ ಸೇಲ್ ಕಾರ್ಯದರ್ಶಿಯಾದ ಉದಯಕುಮಾರ್ ಚಟನಳ್ಳಿ, ಎಸ್ ಟಿ ಘಟಕದ ಅಧ್ಯಕ್ಷರಾದ ಸೂರ್ಯಕಾಂತ ಸಿಂದೊಲ್, ಮೈನಾರಿಟಿ ಘಟಕದ ಅಧ್ಯಕ್ಷರಾದ ಸಾಜಿದ್ ಪಾಷಾ, ಮೈನಾರಿಟಿ ಘಟಕದ ಕಾರ್ಯದರ್ಶಿ ಮಾರ್ಟಿನ್ ಮಾಳಗೆ, ಮುಖಂಡರಾದ ಕುಪೇಂದ್ರ ಸೇರಿ ಅನೇಕರು
ಉಪಸ್ಥಿತರಿದ್ದರು.