ಬೀದರ್: ಬೀದರ ದಕ್ಷಿಣ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಬರುವ ಬಗದಲ್ ತಾಂಡದ ಸುಮಾರು 40 ಕ್ಕೂ ಹೆಚ್ಚು ಯುವಕರು ಬೀದರ ದಕ್ಷಿಣ ಕ್ಷೇತ್ರದ ಮಾಜಿ ಶಾಸಕರಾದ ಅಶೋಕ ಖೇಣಿ ರವರ ಅಭಿವೃದ್ಧಿ ಕಾರ್ಯಮೆಚ್ಚಿ ಹಾಗೂ ಪಕ್ಷ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು ಅವರಿಗೆ ಮಾನ್ಯ ಅಶೋಕ ಖೇಣಿ ರವರು ಹಾಗೂ ಬ್ಲಾಕ ಕಾಂಗ್ರೆಸ್ ಕಮಿಟಿಯ ಅಧ್ಯಕ್ಷರಾದ ಚಂದ್ರಶೇಖರ ಚನಶಟ್ಟಿ, ಕರೀಮ ಸಾಬ ಕಮಠಾಣ ರವರು ಪಕ್ಷದ ಬಾವುಟ ಕೊಟ್ಟು ಬರಮಾಡಿಕೊಂಡರು.
ಬಳಿಕ ಮಾತನಾಡಿದ ಯುವ ಮುಖಂಡರಾದ ಕರಣ ಮಾನ್ಯ ಅಶೋಕ ಖೇಣಿ ರವರು ನಮ್ಮ ತಾಂಡಗಳಿಗೆ ನೀರು, ರಸ್ತೆ ಚರಂಡಿ ಇನ್ನಿತರ ಹಲವು ಅಭಿವೃದ್ಧಿ ಮಾಡಿದ್ದಾರೆ ಮೊದಲು ನಮ್ಮ ತಂಡಗಳಿಗೆ ಯಾರು ನೊಡುತ್ತಾ ಇರಲಿಲ್ಲ ಖೇಣಿ ಸರ್ ಗೆದ್ದಮೇಲೆ ನಮ್ಮ ತಂಡಗಳು ಅಭಿವೃದ್ಧಿ ಆಗಿವೆ ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ನೋಡಬೇಕಾದರೆ ಅಶೋಕ ಖೇಣಿ ರವರಿಗೆ ಮತ ಕೊಟ್ಟು ವಿಧಾನಸಭೆ ಆಯ್ಕೆ ಮಾಡಿ ಅಭಿವೃದ್ಧಿ ನೋಡೋಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಸ್ ಟಿ ಘಟಕದ ಅಧ್ಯಕ್ಷರಾದ ಸೂರ್ಯಕಾಂತ ಸಿಂದೊಲ್, ಕಿಸಾನ್ ಸೇಲ್ ಅಧ್ಯಕ್ಷರಾದ ಸಂತೋಷ ಪಾಟೀಲ, ಯುತ್ ಕಾಂಗ್ರೆಸ್ ಅಧ್ಯಕ್ಷರಾದ ಅಜ್ಮತ್ ಅಲ್ಲೂರಿ, ಮೈನಾರಿಟಿ ಘಟಕದ ಅಧ್ಯಕ್ಷರಾದ ಸಾಜಿದ್ ಪಾಷಾ, ಮೈನಾರಿಟಿ ರಾಜ್ಯ ಘಟಕದ ಕೊಡಿನೆಟರ್ ಸಮಿಯೊದ್ದಿನ್, ಖಂಜಾಚಿ ರಾಜಕುಮಾರ್ ಮಡಕಿ, ಎಸ್ ಸಿ ಘಟಕದ ಕಾರ್ಯದರ್ಶಿ ಯೇಶಪ್ಪಾ ಅಮಲಾಫೂರ, ಮುಖಂಡರಾದ ವೀರಪ್ಪಾ ಅಡ್ಡೆ ಮೊಹಿನ ಫಠಾಣ, ಶರಣು ಸಿದ್ದಾ, ಸೇರಿ ಅನೇಕರು ಉಪಸ್ಥಿತರಿದ್ದರು.