ಬೀದರ್: ಬೀದರ ದಕ್ಷಿಣ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಬರುವ ಶಮಶನಗರ ಗ್ರಾಮದ ಯುವಕರು ಬೀದರ ದಕ್ಷಿಣ ಕ್ಷೇತ್ರದ ಮಾಜಿ ಶಾಸಕರಾದ ಅಶೋಕ ಖೇಣಿರವರ ಅಭಿವೃದ್ಧಿ ಕಾರ್ಯಮೆಚ್ಚಿ ಜೆಡಿಎಸ್ ಪಕ್ಷ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಅವರಿಗೆ ಮಾನ್ಯ ಅಶೋಕ ಖೇಣಿ ರವರು ಹಾಗೂ ಬ್ಲಾಕ ಕಾಂಗ್ರೆಸ್ ಕಮಿಟಿಯ ಅಧ್ಯಕ್ಷರಾದ ಚಂದ್ರಶೇಖರ ಚನಶಟ್ಟಿ, ಕರೀಮ ಸಾಬ ಕಮಠಾಣ ರವರು ಪಕ್ಷದ ಬಾವುಟ ಕೊಟ್ಟು ಬರಮಾಡಿಕೊಂಡರು.
ಸೆರ್ಪಡೆ ನಂತರ ಮಾತನಾಡಿದ ಮಜರ್ ಖಾನ್ ರವರು ನಾವು ಮಾನ್ಯ ಅಶೋಕ ಖೇಣಿ ರವರ ಅಭಿವೃದ್ಧಿ ಕಾರ್ಯಮೆಚ್ಚಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದೇವೆ ಅವರು ಶಾಸಕರಾದ ಅವಧಿಯಲ್ಲಿ ಕ್ಷೇತ್ರಕ್ಕೆ ತುಂಬಾ ಕೆಲಸ ಮಾಡಿದಾರೆ ನಮ್ಮ ಗ್ರಾಮದಲ್ಲಿ ತುಂಬಾ ಕೆಲಸ ಮಾಡಿದಾರೆ ಕೆಳೆದ ಐದು ವರ್ಷದಲ್ಲಿ ಕ್ಷೇತ್ರದಲ್ಲಿ ಅಭಿವೃದ್ಧಿ ಆಗಿಲ್ಲ ಆದರಿಂದ ಮುಂದಿನ ಚುನಾವಣೆಯಲ್ಲಿ ಅಶೋಕ ಖೇಣಿ ರವರಿಗೆ ಮತ ಕೊಟ್ಟು ವಿಧಾನಸಭೆ ಆಯ್ಕೆ ಮಾಡಿ ಅಭಿವೃದ್ಧಿ ನೋಡಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾದ ಅಮ್ರತರಾವ ಚಿಮಕೋಡೆ, ಅನ್ ಅರನೈಜಡ್ ಲೇಬರ್ ಸೇಲ್ ಜಿಲ್ಲಾಧ್ಯಕ್ಷರಾದ ಗೋವರ್ಧನ ರಾಠೋಡ,ಎಸ್ ಟಿ ಘಟಕದ ಅಧ್ಯಕ್ಷರಾದ ಸೂರ್ಯಕಾಂತ ಸಿಂದೊಲ್, ಎಸ್ ಸಿ ಘಟಕದ ಕಾರ್ಯದರ್ಶಿ ಯೇಶಪ್ಪಾ ಅಮಲಾಫೂರ ಸೇರಿ ಅನೇಕರು ಉಪಸ್ಥಿತರಿದ್ದರು.