ಬೀದರ್: ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ನಿರ್ಣಾ ಗ್ರಾಮದ ಅನೇಕ ಜನ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ಮುಖಂಡರು, ಮಾಜಿ ಸಚಿವರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು, ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರ ಸಮ್ಮುಖದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು.
ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಖಾಶೆಂಪುರ್ ಪಿ ಗ್ರಾಮದ ಹೊರವಲಯದಲ್ಲಿರುವ ತಮ್ಮ ನಿವಾಸದ ಆವರಣದಲ್ಲಿ ಮಂಗಳವಾರ ಜೆಡಿಎಸ್ ಶಾಲು ಹೊದಿಸಿ, ಪಕ್ಷದ ಧ್ವಜ ನೀಡುವ ಮೂಲಕ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಕಾರ್ಯಕರ್ತರನ್ನು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಜೆಡಿಎಸ್ ಪಕ್ಷಕ್ಕೆ ಬರಮಾಡಿಕೊಂಡರು.
ಈ ವೇಳೆ ಮಾತನಾಡಿದ ಶಾಸಕ ಬಂಡೆಪ್ಪ ಖಾಶೆಂಪುರ್ ರವರು, ನಿರ್ಣಾ ಗ್ರಾಮದ ಅನೇಕರು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳನ್ನು ತೊರೆದು ಜೆಡಿಎಸ್ ಪಕ್ಷಕ್ಕೆ ಬಂದಿದ್ದಾರೆ. ನೂತನ ಕಾರ್ಯಕರ್ತರನ್ನು ನಾನು ಆತ್ಮೀಯವಾಗಿ ಸ್ವಾಗತಿಸಿದ್ದೇನೆ. ಪಕ್ಷದ ತತ್ವ ಸಿದ್ದಾಂತಗಳ ಬಗ್ಗೆ ಅವರಿಗೆ ಮಾಹಿತಿ ನೀಡಲಾಗಿದ್ದು, ಪಕ್ಷ ಸಂಘಟನೆ ಮತ್ತು ಬಲವರ್ಧನೆಗಾಗಿ ಶ್ರಮಿಸಲು ತಿಳಿಸಿದ್ದೇನೆ.
ಪಕ್ಷದ ಹಿರಿಯರಾದ ಹೆಚ್.ಡಿ ದೇವೇಗೌಡರು, ಹೆಚ್.ಡಿ ಕುಮಾರಸ್ವಾಮಿರವರು, ಸಿಎಂ ಇಬ್ರಾಹಿಂರವರ ಕೈ ಬಲಪಡಿಸಲು ನಾವು ತಳಮಟ್ಟದಿಂದ ಪಕ್ಷ ಬಲಿಷ್ಠಗೊಳಿಸುವ ಕೆಲಸ ಮಾಡಬೇಕಾಗಿದೆ. ಈಗಾಗಲೇ ಜನತಾ ಜಲದಾರೆ, ಪಂಚರತ್ನ ರಥಯಾತ್ರೆಯ ಮೂಲಕ ಪಕ್ಷದ ಹಿರಿಯ ನಾಯಕರು ರಾಜ್ಯಾದ್ಯಂತ ಸಂಚಾರ ನಡೆಸಿದ್ದಾರೆ. ಪಕ್ಷ ಬಲವರ್ಧನೆಗೆ ಅವರು ಹಗಲಿರುಳು ಶ್ರಮಿಸುತ್ತಿದ್ದಾರೆ. ಅವರೊಟ್ಟಿಗೆ ನಾವೆಲ್ಲರೂ ಸಾಗಬೇಕಾಗಿದೆ ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು.
ಈ ಸಂದರ್ಭದಲ್ಲಿ ಮುಖಂಡರಾದ ಲಾಲಪ್ಪ ಎಲ್ ರಾಂಪೂರೆ, ಶ್ರೀನಿವಾಸ್ ಎಮ್ ಅಳ್ಳಿಗಿಡ, ಬಸವರಾಜ್ ಎಸ್ ಸೊಂಡಿ, ನೂತನವಾಗಿ ಸೇರ್ಪಡೆಯಾದ ನಿರ್ಣಾ ಗ್ರಾಮದ ಸನ್ನಿ ಅಳ್ಳಿಗಿಡ, ಪ್ರಕಾಶ ಅಳ್ಳಿಗಿಡ, ಲೋಕೇಶ್ ಅಳ್ಳಿಗಿಡ, ಸ್ಟಿವನ್ ರಾಂಪೂರೆ, ವಿಜಯಕುಮಾರ್ ಜೈರಾಜ್, ಇಮಾನ್ವೇಲ್ ಶಿರೋಮಣಿ, ರಾಕೇಶ್ ರಾಜಕುಮಾರ, ಸಚಿನ್ ಬಕ್ಕಪ್ಪ, ಉಮೇಶ್ ಮೇತ್ರೆ, ವಿಲ್ಸನ್ ಖಾಶೆಂಪುರೆ, ಶೈಲೇಶ್ ರಮೇಶ್, ರಾಜಕುಮಾರ ವಿಠಲ್, ಸಾಲಮಾನ್ ಸೊಂಡಿ, ವಿಶಾಲ್ ಖಾಶೆಂಪುರೆ, ರವಿ ಬಾಬು ಸೊಂಡಿ, ಪಂಡಿತ್ ಮರೆಪ್ಪ, ರಮೇಶ್ ಸುಣದೂರ ಸೇರಿದಂತೆ ಅನೇಕರಿದ್ದರು.