ಬೀದರ್: ಕಾಂಗ್ರೆಸ್ ಪಕ್ಷದ ವರ್ಕರ್ ಕಮಿಟಿ ಜಿಲ್ಲಾ ಘಟಕ ಹಾಗೂ ನದಾಫ್ ಪಿಂಜಾರ್ ಸಂಘದ ಜಿಲ್ಲಾಧ್ಯಕ್ಷರಾದ ಸಲಾಂಪಾಷಾ ರೇಕುಳಗಿ, ಕಾಂಗ್ರೆಸ್ ಪಕ್ಷದ ತಾಲೂಕು (ಬೀದರ್ ದಕ್ಷಿಣ ಕ್ಷೇತ್ರ) ಖಜಾಂಚಿ ವಿಜಯಕುಮಾರ್ ಉಡಬಾಳ್, ಪಕ್ಷದ ಪ್ರಮುಖರಾಗಿದ್ದ ಸತೀಶ್ ಯಾಬಾ ಕಮಠಾಣಾ, ಸತೀಶ್ ಪಾಟೀಲ್ ತಡಪಳ್ಳಿ ಸೇರಿದಂತೆ ಅನೇಕರು ಮಾಜಿ ಸಚಿವರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು, ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರ ಸಮ್ಮುಖದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು.
ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಖಾಶೆಂಪುರ್ ಪಿ ಗ್ರಾಮದ ಹೊರವಲಯದಲ್ಲಿರುವ ತಮ್ಮ ನಿವಾಸದ ಆವರಣದಲ್ಲಿ ಬುಧವಾರ ಮಧ್ಯಾಹ್ನ ಕಾಂಗ್ರೆಸ್ ಪಕ್ಷದ ಪ್ರಮುಖರಿಗೆ ಜೆಡಿಎಸ್ ಶಾಲು ಹೊದಿಸಿ, ಪಕ್ಷದ ಧ್ವಜ ನೀಡುವ ಮೂಲಕ ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಜೆಡಿಎಸ್ ಪಕ್ಷಕ್ಕೆ ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಪ್ರಮುಖರಾದ ಮಹೇಶ್ ಚಿಂತಾಮಣಿ, ಗಣಪತಿ ಶಂಭು, ಶಿವಕುಮಾರ್ ಪಾಟೀಲ್ ಬಂಬಳಗಿ, ಅಭಿಲಾಶ್ ಸಿಂಧೆ ನಾಗೋರ ಸೇರಿದಂತೆ ಅನೇಕರಿದ್ದರು.