News Karnataka Kannada
Sunday, May 05 2024
ದೇಶ

ಮುಂಬೈ: ಅಯೋಧ್ಯೆ ರಾಮಮಂದಿರಕ್ಕೆ ತೇಗದ ಮರ ಕೊಡುಗೆ

Mumbai: Teak tree donated to Ram temple in Ayodhya
Photo Credit : By Author

ಮುಂಬೈ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ದೇಶದ ಪ್ರತಿಯೊಬ್ಬರು ವಿವಿಧ ರೀತಿಯ ಕೊಡುಗೆಗಳನ್ನು ನೀಡುತ್ತಿರುವುದು ಗೊತ್ತೇ ಇದೆ. ಅದೇ ರೀತಿ ಮಹಾರಾಷ್ಟ್ರದಿಂದ ತೇಗದ ಮರ ಕೊಡುಗೆ ನೀಡಲಾಗುತ್ತಿದೆ. ತೇಗದ ಮರವು ದೇವಾಲಯದ ಮುಖ್ಯ, ಒಳಗಿನ ಬಾಗಿಲು, ಗರ್ಭಗುಡಿಯ ಪ್ರವೇಶದ್ವಾರ, ಜೊತೆಗೆ ಇಡೀ ದೇವಾಲಯದ ಸಂಕೀರ್ಣಕ್ಕೆ ಬಳಕೆಯಾಗಲಿದೆ.

ತೇಗದ ಮರ ಹಸ್ತಾಂತರ ಕಾರ್ಯಕ್ರಮವನ್ನು ವಿಶೇಷ ಸಂಭ್ರಮವಾಗಿ ಆಚರಿಸಲಾಯಿತು. 1987ರ ದಶಕದ ಟೆಲಿ ಧಾರಾವಾಹಿ ರಾಮಾಯಣದ ನಟರು, ಇತರೆ ಖ್ಯಾತನಾಮರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಚಂದ್ರಾಪುರ ಜಿಲ್ಲೆಯ ತೇಗದ ಮರವನ್ನು ರಾಮಮಂದಿರಕ್ಕೆ ನೀಡಲಾಗಿದೆ ಎಂದು ಅರಣ್ಯ ಸಚಿವ ಸುಧೀರ್ ಮುಂಗಂಟಿವಾರ್ ಹೇಳಿದ್ದಾರೆ. ಮೆರವಣಿಗೆ, ಪ್ರಾರ್ಥನೆ, ಪೂಜೆ, ನೃತ್ಯ ಪ್ರದರ್ಶನ ಬಳಿಕ ತೇಗದ ಮರ ಪುರಮೆರವಣಿಗೆ ನಡೆಯಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು