ಮುಂಬೈ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ದೇಶದ ಪ್ರತಿಯೊಬ್ಬರು ವಿವಿಧ ರೀತಿಯ ಕೊಡುಗೆಗಳನ್ನು ನೀಡುತ್ತಿರುವುದು ಗೊತ್ತೇ ಇದೆ. ಅದೇ ರೀತಿ ಮಹಾರಾಷ್ಟ್ರದಿಂದ ತೇಗದ ಮರ ಕೊಡುಗೆ ನೀಡಲಾಗುತ್ತಿದೆ. ತೇಗದ ಮರವು ದೇವಾಲಯದ ಮುಖ್ಯ, ಒಳಗಿನ ಬಾಗಿಲು, ಗರ್ಭಗುಡಿಯ ಪ್ರವೇಶದ್ವಾರ, ಜೊತೆಗೆ ಇಡೀ ದೇವಾಲಯದ ಸಂಕೀರ್ಣಕ್ಕೆ ಬಳಕೆಯಾಗಲಿದೆ.
ತೇಗದ ಮರ ಹಸ್ತಾಂತರ ಕಾರ್ಯಕ್ರಮವನ್ನು ವಿಶೇಷ ಸಂಭ್ರಮವಾಗಿ ಆಚರಿಸಲಾಯಿತು. 1987ರ ದಶಕದ ಟೆಲಿ ಧಾರಾವಾಹಿ ರಾಮಾಯಣದ ನಟರು, ಇತರೆ ಖ್ಯಾತನಾಮರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಚಂದ್ರಾಪುರ ಜಿಲ್ಲೆಯ ತೇಗದ ಮರವನ್ನು ರಾಮಮಂದಿರಕ್ಕೆ ನೀಡಲಾಗಿದೆ ಎಂದು ಅರಣ್ಯ ಸಚಿವ ಸುಧೀರ್ ಮುಂಗಂಟಿವಾರ್ ಹೇಳಿದ್ದಾರೆ. ಮೆರವಣಿಗೆ, ಪ್ರಾರ್ಥನೆ, ಪೂಜೆ, ನೃತ್ಯ ಪ್ರದರ್ಶನ ಬಳಿಕ ತೇಗದ ಮರ ಪುರಮೆರವಣಿಗೆ ನಡೆಯಿತು.