ಬೀದರ್: ದಕ್ಷಿಣ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಚಾಂಗಲೇರಾ ಗ್ರಾಮದ ಯುವಕರು ಬೀದರ್ ದಕ್ಷಿಣ ಕ್ಷೇತ್ರದ ಮಾಜಿ ಶಾಸಕರಾದ ಅಶೋಕ ಖೇಣಿ ರವರ ಅಭಿವೃದ್ಧಿ ಕಾರ್ಯಮೆಚ್ಚಿ ಅನ್ಯ ಪಕ್ಷ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಅವರಿಗೆ ಅಶೋಕ ಖೇಣಿ ರವರು ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಗಳಾದ ಮಿನಾಕ್ಷಿ ಸಂಗ್ರಾಮ ಬ್ಲಾಕ ಕಾಂಗ್ರೆಸ್ ಕಮಿಟಿಯ ಅಧ್ಯಕ್ಷರಾದ ಚಂದ್ರಶೇಖರ ಚನಶಟ್ಟಿ ಕರೀಮ ಸಾಬ ಕಮಠಾಣ ರವರು ಪಕ್ಷದ ಬಾವುಟ ಕೊಟ್ಟು ಬರಮಾಡಿಕೊಂಡರು.
ಸೇರ್ಪಡೆಯಾದ ಬಳಿಕ ವಿದ್ಯಾಸಾಗರ ಚಾಂಗಲೇರಾ ರವರನ್ನು ದಕ್ಷಿಣ ಕ್ಷೇತ್ರದ ಎಸ್ ಸಿ ಘಟಕದ ಕಾರ್ಯದರ್ಶಿ ನೇಮಕಮಾಡಿ ಆದೇಶ ಪತ್ರ ನೀಡಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಮಹೆಬೂಬ್ ಚಾಂಗಲೇರಾ, ಗ್ರಾಮ ಪಂಚಾಯತ ಸದಸ್ಯರಾದ ಭಾಸ್ಕರ್, ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷರಾದ ಮೊಯೀಜ್ ಫಠಾಣ, ಅಮಲಾಫೂರ ಗ್ರಾಮ ಪಂಚಾಯತ ಸದಸ್ಯರಾದ ಮೋಹಿನ್ ಫಠಾಣ, ಮುಖಂಡರಾದ ಜುಬೇರ್ ಪಟೇಲ್, ಸಂತೋಷ ರಾಜಗೀರಾ ಸೇರಿ ಅನೇಕರು ಉಪಸ್ಥಿತರಿದ್ದರು.