ಬೀದರ್: ಸಾಹಿತ್ಯ, ಕಲೆ, ಪತ್ರಿಕಾ ಮಾಧ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳ 17 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲು ಜಿಲ್ಲಾಡಳಿತ ನಿರ್ಧರಿಸಿದೆ ಎಂದು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ತಿಳಿಸಿದ್ದಾರೆ.
ಪ್ರಶಸ್ತಿಗೆ ಆಯ್ಕೆಯಾದವರ ಹೆಸರು, ಕ್ಷೇತ್ರದ ವಿವರ ಇಂತಿದೆ: ಪ್ರದೀಪ ಅಮರ ಬಿರಾದಾರ (ಪತ್ರಿಕಾ ಮಾಧ್ಯಮ), ಚಿನ್ನಮ್ಮಾ ವಲ್ಲೆಪುರೆ ಹಣಮಂತ, ರಜೀಯಾ ಬಳಬಟ್ಟಿ ಮಸ್ತಾನ್ ಸಾಬ್, ಸುರೇಂದ್ರ ಸಂಗಪ್ಪಾ ಹೊಡಮನಿ (ಸಾಹಿತ್ಯ), ಶರಣಪ್ಪಾ ಮಾಣಿಕಪ್ಪಾ (ಜಾನಪದ), ಮೋಹನ್ ಮಿಲಿಂದ (ಸಂಗೀತ), ಶಂಕ್ರೆಪ್ಪಾ ಭೀಮರಾವ ಬಿರಾದಾರ, ಶಂಕರರಾವ ಹೊನ್ನಾ, ಪೀಟರ್ ಸೈಮನ್ (ಕನ್ನಡ ನಾಡು ನುಡಿ), ಸಂಗಮೇಶ್ವರ ಜ್ಯಾಂತೆ, ಸುಬ್ಬಣ್ಣ ಶಿವಪ್ಪಾ ಕರಕನಳ್ಳಿ, ಅಭಿ ತಿಪ್ಪಣ್ಣ ಕಾಳೆ, ಮಹೇಶ ಮಾಣಿಕಪ್ಪಾ ಗೋರನಾಳಕರ, ಛಾಯಾ ಶಿವಕುಮಾರ, ಸಂಗಮೇಶ ಬಸಪ್ಪಾ ಗುಮ್ಮೆ (ಸಮಾಜ ಸೇವೆ), ಶರದ ಕುಲಕರ್ಣಿ (ಚಿತ್ರಕಲೆ), ಬಸವರಾಜ ಬಶೆಟ್ಟಿ ಸಂಗ್ರಾಮಪ್ಪ (ಕನ್ನಡ ನಾಡು ನುಡಿ).
ಯುವ ಗಾಯಕಿ ಶಿವಾನಿ ಶಿವದಾಸ ಸ್ವಾಮಿ ಅವರನ್ನು ಕಾರ್ಯಕ್ರಮದಲ್ಲಿ ವಿಶೇಷ ಸನ್ಮಾನ ಮಾಡಲಾಗುವುದು ಎಂದು ತಿಳಿಸಿದ್ದಾರೆ.