ಬೀದರ್ ; ಮನ್ನಾಏಖೇಳಿ ಪೊಲೀಸರಿಂದ “ಕ್ಷೀರ ಭಾಗ್ಯ” ಯೋಜನೆಯಡಿ ಸರ್ಕಾರದಿಂದ ವಿತರಿಸಿಲಾದ 50 ಸಾವಿರ ಕ್ಕೂ ಅಧಿಕ ಮೌಲ್ಯದ ಹಾಲಿನ ಪೌಡರ್ ಪಾಕೇಟ್ ಜಪ್ತಿ ಮಾಡಲಾಗಿದೆ.
ಮಾನ್ಯ ಹಿರಿಯ ಅಧಿಕಾರಿಯವರ ಮಾರ್ಗದರ್ಶನದಂತೆ, ಮನ್ನಾಏಖೇಳಿಯ ಮನೆಯೊಂದರಲ್ಲಿ ಸರ್ಕಾರದಿಂದ ಶಾಲಾ ಮಕ್ಕಳಿಗೆ ಮತ್ತು ಅಂಗನವಾಡಿ ಮಕ್ಕಳ ಪೌಷ್ಟಿಕ ಆಹಾರದ ಉದ್ದೇಶದ ಅಂಗವಾಗಿ ಜಾರಿಯಲ್ಲಿರುವ “ಕ್ಷೀರ ಭಾಗ್ಯ” ಯೋಜನೆಯಡಿ ಉಚಿತವಾಗಿ ಸರಬರಾಜು ಆದ ಕೆನೆ ಭರಿತ ಹಾಲಿನ ಪೌಡರಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟ ಮಾಹಿತಿಯಂತೆ ಪಿ.ಎಸ್.ಐ ಶ್ರೀ, ಬಸವರಾಜ ರವರು ಸಿಬ್ಬಂದಿ ಶ್ರೀ, ಶಿವರಾಜ, ಹನುಮೇಶ ರವರೊಂದಿಗೆ ಶ್ರೀ, ಸಂಜೀವಕುಮಾರ, ಸಹಾಯಕ ನಿರ್ದೇಶಕರು ಅಕ್ಷರ ದಾಸೋಹ ಕಾರ್ಯಕ್ರಮ ಹುಮನಾಬಾದ ರವರ ಸಮಕ್ಷಮ ದಾಳಿ ಮಾಡಿ 170 ಹಾಲಿನ ಪೌಡರ್ ಪಾಕೇಟ್ ಅಕ್ಕಿ 51,000.00 ರೂಪಾಯಿ ಮೌಲ್ಯ ಬೆಲೆ ಬಾಳುವ ವಸ್ತುಗಳನ್ನು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿದ್ದಾರೆ.