ಮೈಸೂರು: ರಾಜ್ಯದಲ್ಲಿ ಕಾಂಗ್ರೆಸ್ನ ನಿರಂತರ ಸೋಲಿನಿಂದಾಗಿ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ನವರಿಗೆ ಮತಿಭ್ರಮಣೆಯಾದಂತಿದೆ. ಹಾಗಾಗಿಯೇ ಪ್ರಧಾನಿ ನರೇಂದ್ರ ಮೋದಿ ಅವರ ಕುರಿತಂತೆ ಬಾಯಿಗೆ ಬಂದoತೆ ಮಾತನಾಡುತ್ತಿದ್ದಾರೆ ಎಂದು ಬಿಜೆಪಿ ಟೀಕಿಸಿದೆ.
ನಿರಂತರ ಪ್ರಚಾರದಲ್ಲಿರುವ ದೃಷ್ಟಿಯಿಂದ ಅವರು ಈ ಹಿಂದೆ ಆರ್ಎಸ್ಎಸ್ ಬಗ್ಗೆ, ಟೀಕಿಸುವುದನ್ನೇ ಚಾಳಿ ಮಾಡಿಕೊಂಡಿದ್ದರು. ಈಗ ವಿಶ್ವವಂದ್ಯ ನಾಯಕರಾದ ವಿಪಕ್ಷ ನಾಯಕ ಸಿದ್ದರಾಮಯ್ಯ ನಾಲಿಗೆಯ ಮೇಲೆ ಹಿಡಿತ ಕಳೆದುಕೊಂಡಿದ್ದಾರೆ.
ಬಾಯಿಗೆ ಬಂದoತೆ ಹರಟುತ್ತಾರೆ, ಅಹಂಕಾರದ ಮಾತುಗಳು, ತಿರಸ್ಕಾರದ ಮಾತುಗಳು ಅಸಂಸ್ಕೃತಿ ಮಾತುಗಳು ಎಲ್ಲರನ್ನೂ ಏಕವಚನದಲ್ಲಿ ಮಾತನಾಡುವುದು ಅವರಿಗೆ ಅಭ್ಯಾಸವಾಗಿಬಿಟ್ಟಿದೆ ತಾನೊಬ್ಬನೇ ಬಡವರ ಗುತ್ತಿಗೆದಾರ ಅಂದುಕೊoಡು ಬಿಟ್ಟಿದ್ದಾರೆ ಎಂದು ರಾಜ್ಯ ಬಿಜೆಪಿ ವಕ್ತಾರ ಎಂ.ಜಿ.ಮಹೇಶ್ ನಗರದ ಬಿಜೆಪಿ ಕಚೇರಿಯಲ್ಲಿಂದು ನಡೆಸಿದ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು. ಸಿದ್ದರಾಮಯ, ಅಲ್ಲಿಯೂ ಸಲ್ಲದ ಇಲ್ಲಿಯೂ ಸಲ್ಲದ ನಾಯಕರಾಗಿ ಹತಾಶೆಯ ಪರಮಾವಧಿಗೆ ತಲುಪಿದ್ದಾರೆ. ಅದಕ್ಕಾಗಿ ತಮ್ಮ ಬಾಯಿ ಚವಲ ತೀರಿಸಿಕೊಳ್ಳಲು ಇಲ್ಲ ಸಲ್ಲದ ಮಾತನ್ನು ಮುಂದುವರೆಸಿದ್ದಾರೆ.
ದಲಿತರು, ಹಿಂದುಳಿದ ವರ್ಗದವರು ಸೇರಿದಂತೆ ಎಲ್ಲರೂ ಕಾಂಗ್ರೆಸನ್ನು ಮೂಲೆಗುಂಪು ಮಾಡುತ್ತಿರುವುದು ಸಿದ್ದರಾಮಯ್ಯನವರಿಗೆ ಗೊತ್ತಾದಂತಿದೆ. ಅದೇ ಕಾರಣಕ್ಕಾಗಿ ಮುಖ್ಯಮಂತ್ರಿ ಕುರಿತ ಕನಸು ಕನಸಾಗಿಯೇ ಉಳಿಯುವ ಭೀತಿಯಿಂದ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದರು.
ಕಾಂಗ್ರೆಸ್ ಆಡಳಿತ ಇರುವ ಎಲ್ಲ ರಾಜ್ಯಗಳಲ್ಲಿ ಒಳಜಗಳ ಮುಂದುವರಿದಿದೆ. ಕರ್ನಾಟಕದಲ್ಲಂತೂ ಡಿ.ಕೆ. ಶಿವಕುಮಾರ್ ಬಣ, ಸಿದ್ಧರಾಮಯ್ಯ ಬಣ, ಡಾ.ಪರಮೇಶ್ವರ್ ಬಣ, ಮಲ್ಲಿಕಾರ್ಜುನ ಖರ್ಗೆ ಅವರ ಬಣ ಹೀಗೆ ಹತ್ತು ಹಲವು ಬಣಗಳಿಂದಾಗಿ ಕಾಂಗ್ರೆಸ್ ಪಕ್ಷವು ನುಚ್ಚುನೂರಾಗುವ ಹಂತದಲ್ಲಿದೆ. ಅದಕ್ಕಾಗಿ ಈ ಹುಚ್ಚುತನದ ಆರೋಪಗಳನ್ನು ಮತ್ತು ಆಕ್ಷೇಪಣ ಹೇಳಿಕೆಗಳನ್ನು ಸಿದ್ದರಾಮಯ್ಯ ಮುಂದುವರೆಸಿದ್ದಾರೆ ಎಂದರು.
ನಿರoತರ ಎರಡು ದಶಕಗಳಿಂದ ಜನರಿಂದ ಆಯ್ಕೆಯಾಗಿ ಅಪಾರ ಜನಮನ್ನಣೆಯೊಂದಿಗೆ ಸಾಂವಿಧಾನಿಕ ಹುದ್ದೆಯಲ್ಲಿರುವ ಪ್ರಧಾನಿ ಮೋದಿ ಅವರ ಬಗ್ಗೆ ಏಕವಚನದಲ್ಲಿ ಮಾತನಾಡುವ ಮುನ್ನ ಸಿದ್ಧರಾಮಯ್ಯನವರು ಎಚ್ಚರ ವಹಿಸಬೇಕು ಮತ್ತು ತಮ್ಮ ಹೇಳಿಕೆಗಾಗಿ ದೇಶದ ಜನರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಸಹ ವಕ್ತಾರ ಕೇಬಲ್ ಮಹೇಶ್, ಮಾಧ್ಯಮ ಸಂಚಾಲಕ ಪ್ರದೀಪ್ ಕುಮಾರ್, ಮಾಜಿ ನಗರಪಾಲಿಕೆ ಸದಸ್ಯ ಜಯರಾಮ್, ಶಿವಕುಮಾರ್ ಉಪಸ್ಥಿತರಿದ್ದರು.